ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶನಿವಾರದಂದು ಲಂಡನ್ ನಲ್ಲಿ ಇರುವ ಬಸವೇಶ್ವರ ವಿಗ್ರಹಕ್ಕೆ ಗೌರವ ಸಲ್ಲಿಸಿದರು.ಲಂಡನ್ ನಲ್ಲಿ ಇರುವ ಮೈಸೂರ ರಸ್ತೆಯಲ್ಲಿ ಇಬ್ಬರೂ ನಡೆದಾಡಿದರು. ಹದಿನೆಂಟನೇ ಶತಮಾನದಲ್ಲಿ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಬ್ರಿಟಿಷ್ ಮೈಸೂರು ರೆಜಿಮೆಂಟ್ ನ ನೇಮಕಾತಿ ಕೇಂದ್ರ ಇದೇ ಸ್ಥಳದಲ್ಲಿತ್ತು. ಆದ್ದರಿಂದ ಮೈಸೂರು ರಸ್ತೆ ಎಂದೇ ಹೆಸರಾಗಿದೆ.ಯದುವೀರ್ ಅವರ ಜತೆಗೆ ಪತ್ನಿ ತ್ರಿಷಿಕಾ ಒಡೆಯರ್ ಕೂಡ ಇದ್ದರು.
ಲಂಡನ್ ನ ಬರೋ ಆಫ್ ಲಾಂಬೆತ್ ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಈ ಸಂದರ್ಭದಲ್ಲಿ ಹಾಜರಿದ್ದರು. ಬ್ರಿಟಿಷ್ ಭಾರತೀಯ/ಕನ್ನಡ ಸಮುದಾಯ ಹಾಗೂ ಯುನೈಟೆಡ್ ಕಿಂಗ್ ಡಮ್ ಬಸವ ಸಮಿತಿ ಅಧ್ಯಕ್ಷ ಅಭಿಜಿತ್ ಸಾಲಿಮಠ್ ಭಾಗವಹಿಸಿದ್ದರು