ಬೆಂಗಳೂರು

ಕೆಆರ್‌ಪುರಂ ಬಳಿ ಬಿಎಂಟಿಸಿ ಬಸ್‌ ಡಿಕ್ಕಿ: ಟೆಕ್ಕಿ ಸ್ಥಳದಲ್ಲೇ ಸಾವು

Published

on

ಬೆಂಗಳೂರು, ಡಿಸೆಂಬರ್ 19: ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆಆರ್‌ ಪುರಂ ಬಳಿ ಬುಧವಾರ ನಡೆದಿದೆ.

ಕೆಆರ್‌ಪುರಂ ಬಳಿಯ ಬಿ ನಾಯಾರಣಪುರದಲ್ಲಿ ಈ ಘಟನೆ ಸಂಭವಿಸಿದ್ದು ಬೈಕ್ ಸವಾರ ನೊಮಾನ್ ನೌಷಾದ್(24) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಿಎಂಟಿಸಿ ಬಸ್ ಡಿಕ್ಕಿ: ಇಬ್ಬರು ಕಾಲೇಜು ವಿದ್ಯಾರ್ಥಿಗಳ ಸಾವು

ಮಂಗಳವಾರವಷ್ಟೇ ಮೈಸೂರು ರಸ್ತೆಯ ಕಸೂರ್‌ಬಾ ಕಾಲೇಜು ಬಳಿ ಬಿಎಂಟಿಸಿ ಬಸ್‌ ಒಂದು ಡಿಕ್ಕಿ ಹೊಡೆದ ಪರಿಣಾಮ ಬಿಬಿಎಂಪಿ ಕಾಲೇಜಿನ ಪಿಯು ವಿದ್ಯಾರ್ಥಿಗಳಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು.

ಕಾಲೇಜಿಗೆ ಹೋಗಲು ನಿಂತಿದ್ದ ವೇಳೆ ಬಿಎಂಟಿಸಿ ಬಸ್ ಬಂದು ಡಿಕ್ಕಿ ಹೊಡೆದು ಯದುಕುಮಾರ್ ಹಾಗೂ ಚಂದ್ರಕಾಂತ್ ಅವರ ಪ್ರಾಣವನ್ನು ತೆಗೆದಿತ್ತು. ಇದೀಗ ಮತ್ತೊಂದು ಅಂಥದ್ದೇ ಘಟನೆಗೆ ಬೆಂಗಳೂರು ಸಾಕ್ಷಿಯಾಗಿದೆ. ಬೈಕ್‌ ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Click to comment

Trending

Exit mobile version