ರಾಜ್ಯ

ಪರಮೇಶ್ವರ್ ರನ್ನು ಗೃಹ ಇಲಾಖೆಯಿಂದ ತೆಗೆಯಬಾರದಿತ್ತು : ರೇವಣ್ಣ

Published

on

ಬೆಂಗಳೂರು : ಪರಮೇಶ್ವರ್ ಅವರನ್ನು ಗೃಹ ಇಲಾಖೆಯಿಂದ ತೆಗೆಯಬಾರದಿತ್ತು. ಅವರನ್ನು ಗೃಹ ಸಚಿವರಾಗಿ ಮುಂದುವರೆಸಬೇಕಿತ್ತು ಎಂದು ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ ಪರಮೇಶ್ವರ್ ಅವರನ್ನು ಗೃಹ ಇಲಾಖೆಯಿಂದ ತೆಗೆಯಬಾರದಿತ್ತು. ಅರು ತಿಂಗಳು ಅವರು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ’ ಎಂದು ಅವರು ಹೇಳಿದರು.

ಸಿಎಂ ಹೆಚ್ ಡಿ ಕುಮಾರಸ್ವಾಮಿ ರಾಜಕೀಯ ಕಾರ್ಯದರ್ಶಿ ನೇಮಕಾತಿ ವಿಚಾರವಾಗಿ ಮಾತನಾಡಿದ ಅವರು ‘ ಸಿಎಂ ಕಾರ್ಯದರ್ಶಿ ವಿಷಯ ನನಗೆ ಗೊತ್ತಿಲ್ಲ, ಅದಕ್ಕೂ ನನಗೆ ಸಂಬಂಧ ಇಲ್ಲ. ಯಾರು ನೇಮಕಾತಿ ಮಾಡಿದ್ದಾರೋ ಅವರನ್ನೇ ಕೇಳಿ. ಸಿಎಂ ಎಷ್ಟು ದಿನ ಇದನ್ನೆಲ್ಲಾ ತಡೆದುಕೊಳ್ತಾರೋ’ ಎಂದು ಕಾಂಗ್ರೆಸ್ ವಿರುದ್ಧ ಗರಂ ಆದರು.

Click to comment

Trending

Exit mobile version