ಖಡಕ್ ಐಪಿಎಸ್ ಅಧಿಕಾರಿ ಎಂದು ಹೆಸರು ಮಾಡಿರುವ ಮಧುಕರ್ ಶೆಟ್ಟರು ಅಕಾಲ ಮೃತ್ಯುವಿಗೀಡಾಗಿದ್ದು ಅಘಾತಕಾರಿ ಸಂಗತಿ. ಚಿಕ್ಕಮಗಳೂರಿನಲ್ಲಿ ಎಸ್ಪಿಯಾಗಿ, ಲೋಕಾಯುಕ್ತದ ಅಧಿಕಾರಿಯಾಗಿ ಬಹಳಷ್ಟು ಹೆಸರು ಮಾಡಿದ್ದ ಮಧುಕರ್ ಶೆಟ್ಟರು ಇಷ್ಟು ಬೇಗ ಕನು ಮರೆಯಾಗಿರುವುದು ನೋವಿನ ಸಂಗತಿ. ಮೂಲತಃ ಉಡುಪಿ ಜಿಲ್ಲೆಯ ವಡ್ಡರ್ಸೆಯವರಾದ ಮಧುಕರ್ ಶೆಟ್ಟರವರು ಖ್ಯಾತ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟರವರ ಮಗ..ವರು ಬಹಳ ನಿಷ್ಠುರವಾದಿಯಾಗಿದ್ದರು. ಕಳೆದ ದಿನಗಳಿಂದ ಮಧುಕರ್ ಶೆಟ್ಟಿ ಹೆಚ್ 1, ಎನ್1 ಖಾಯಿಲೆ ಯಿಂದ ಬಳಲುತ್ತಾ ಹೈದರಾಬಾದ್ ನಲ್ಲಿ ಚಿಕಿತ್ಸೆ ಪಡೆಯುತಿದ್ದರು ಆದರೇ ಚಿಕಿತ್ಸೆ ಫಲಿಸಿದೆ ಅವರು ಕೊನೆ ಉಸಿರು ಬಿಟ್ಟರು….
ಮಧುಕರ್ ಶೆಟ್ಟರ ಈ ಅಕಾಲಿಕ ಮರಣದ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತನು ಅವರ ಕುಟುಂಬ ವರ್ಗಕ್ಕೆ ನೀಡಲಿ.