ಕೊಪ್ಪಳ : ಜಿಲ್ಲೆಯಲ್ಲಿ ಸುರಿದ ಅಲಿಕಲ್ಲು ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ಬೆಳೆಗಳು ನೆಲಕಚ್ಚಿವೆ.
ಅಂದ ಹಾಗೇ ಜಿಲ್ಲೆಯ ಗಂಗಾವತಿ ತಾಲೂಕಿನ ಗ್ರಾಮೀಣ ಭಾಗಗಳಾದ ಕಲ್ಗುಡಿ, ಶ್ರೀರಾಮನಗರ, ಮರಳಿ, ಸಿದ್ದಾಪುರ, ಗುಳ್ಳದಳ್ಳಿ, ಮಸಾರಿಕ್ಯಾಂಪ್, ಹೇರೂರು, ಕೆಸರಟ್ಟಿ, ಮಲಕನಮರಡಿ, ಬಾಪಿರೆಡ್ಡಿ ಕ್ಯಾಂಪ್, ಭಟ್ಟರಹಂಚಿನಾಳ, ಗೋನಾಳಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದು,ಭಾರೀ ಪ್ರಮಾಣದ ಬೆಳೆ ನಾಶವಾಗಿದೆ.
ಇನ್ನು ಈ ತಾಲೂಕಿನ ಕೆಲ ಗ್ರಾಮಗಳಲ್ಲಿ ಆಲಿಕಲ್ಲು ಮಳೆ ಬಿದ್ದಿದ್ದು,ಆನೆಗೊಂದಿ ಭಾಗದಲ್ಲಿನ ವರುಣನ ಆರ್ಭಟಕ್ಕೆ ಸೊಂಪಾಗಿ ಬೆಳೆದಿದ್ದ ಬಾಳೆ ನಾಶವಾಗಿದೆ. ವೆಂಕಟಗಿರಿ ಭಾಗದಲ್ಲಿ ತೋಟಗಾರಿಕಾ ಬೆಳೆಗಳಾದ ಪಪ್ಪಾಯಿ, ಮಾವಿನ ಚಿಗುರು ಉದುರಿದೆ.
ಇದಲ್ಲದೆ,ಹೊಸಳ್ಳಿ ಗ್ರಾಮದಲ್ಲಿ ನೂರಾರು ಎಕರೆ ಭತ್ತದ ಬೆಳೆ ಹಾನಿಯಾಗಿದೆ. ಹಣವಾಳ, ಗುಂಡೂರು, ಸಿಂಗನಾಳ, ಸಿಂಗನಾಳ ಕ್ಯಾಂಪ್ ಮೊದಲಾದ ಗ್ರಾಮಗಳಲ್ಲಿ ನೀರಿನ ರಭಸಕ್ಕೆ ರಸ್ತೆ ಕೊಚ್ಚಿ ಹೋಗಿದೆ.
ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಕೊಪ್ಪಳ