ಬೆಂಗಳೂರು:ನಾಳೆ ಮದ್ಯದಂಗಡಿ ಓಪ್ನ್ ಮಾಡಲಾಗುತ್ತದೆ ಎಂಬುದಾಗಿ ಆಸೆಯಲ್ಲಿದ್ದ ಮದ್ಯಪ್ರಿಯರಿಗೆ ಕೊನೆಗೂ ರಾಜ್ಯ ಸರ್ಕಾರ ಶಾಕಿಂಗ್ ನ್ಯೂಸ್ ಕೊಟ್ಟಿದೆ.ಸದ್ಯ ಏಪ್ರಿಲ್ ೨೦ರವರೆಗೆ ಮದ್ಯದಂಗಡಿ ತೆರೆಯುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಅಂದ ಹಾಗೇ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಬಕಾರಿ ಸಚಿವ ಎಚ್.ನಾಗೇಶ್, ಜನಸಂದಣಿ ಉಂಟಾಗುವ ದೃಷ್ಟಿಯಿಂದ ಮದ್ಯದಂಗಡಿ ತೆರೆಯದಿರಲು ನಿರ್ಧರಿಸಿರೋದಾಗಿ ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ,ಏಪ್ರಿಲ್ ೨೦ರ ನಂತರ ಮದ್ಯದಂಗಡಿ ತೆರೆಯುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು,ಅಲ್ಲಿವರೆಗೂ ಮದ್ಯ ಸಿಗುವುದಿಲ್ಲ,ಹೀಗಾಗಿ ಮದ್ಯ ಪ್ರಿಯರು ಇನ್ನೂ ಕಾಯಬೇಕು ಎಂದು ಹೇಳಿದ್ದಾರೆ.
ಇನ್ನು ಬೆಳಿಗ್ಗೆಯಷ್ಟೆ ಸಿಎಂ ಯಡಿಯೂರಪ್ಪ ಬೆಂಗಳೂರಿನ ಗೃಹಾ ಕಚೇರಿ ಕೃಷ್ಣಾದಲ್ಲಿ ಸದ್ಯಕ್ಕೆ ಮದ್ಯ ಮಾರಾಟ ಇಲ್ಲ ಎಂದಿದ್ದರು.ಇದರ ಬೆನ್ನಲ್ಲೇ ಇದೀಗ ಅಬಕಾರಿ ಸಚಿವ ಎಚ್.ನಾಗೇಶ್, ಏಪ್ರಿಲ್ ೨೦ರವರೆಗೆ ಮದ್ಯದಂಗಡಿ ತೆರೆಯುವುದಿಲ್ಲ ಎನ್ನುವ ಮೂಲಕ ಮದ್ಯಪ್ರಿಯರನ್ನು ನಿರಾಸೆಗೊಳಿಸಿದ್ದಾರೆ.
ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು