ಆರೋಗ್ಯ / HEALTH

ನ್ಯಾಯಬೆಲೆ ಅಂಗಡಿಯವರಿ0ದ ಹಣ ವಸೂಲಿಗೆ ನಿಂತ ಸರ್ಕಾರ..

Published

on

ಬಳ್ಳಾರಿ:ಬಿಪಿಎಲ್ ಸೇರಿದಂತೆ ಪಡಿತರ ಚೀಟಿ ಇಲ್ಲದವರಿಗೂ ಉಚಿತವಾಗಿ ಪಡಿತರ ಹಂಚಿಕೆ ಮಾಡಲು ಮೊನ್ನೆಯಷ್ಟೆ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು.ಆದರೆ ಅದೇ ರಾಜ್ಯ ಸರ್ಕಾರವೀಗ ರಾಜಾರೋಷವಾಗಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿದಾರರಿಂದ ಹಣ ವಸೂಲಿಗೆ ನಿಂತಿದೆ.
ಅAದ ಹಾಗೇ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ತೆಲಗಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿಕಾರ್ಡ್ಗೆ ೨೦_೩೦ ರೂಪಾಯಿ ಹಣವನ್ನು ರಾಜಾರೋಷವಾಗಿ ನ್ಯಾಯಬೆಲೆ ಅಂಗಡಿಯವರು ಪಡೆಯುತ್ತಿದ್ದಾರೆ.ಇದರ ಬಗ್ಗೆ ಕಾರ್ಡ್ದಾರರು ಪ್ರಶ್ನಿಸಿದರೇ ಸರ್ಕಾರದಿಂದಲೇ ಹಣ ಪಡೆಯುವಂತೆ ಅದೇಶ ನೀಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಇನ್ನು ನ್ಯಾಯಬೆಲೆ ಅಂಗಡಿ ಮಾಲೀಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪಡಿತರ ವಿತರಣೆ ಮಾಡುತ್ತಿದ್ದು,ಜಿಲ್ಲಾಧಿಕಾರಿ ಅದೇಶ ನೀಡಿದರು ಕೆಲ ನ್ಯಾಯಬೆಲೆ ಅಂಗಡಿ ಮಾಲೀಕರಂತೂ ಕ್ಯಾರೆ ಎನ್ನುತ್ತಿಲ್ಲ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬಳ್ಳಾರಿ

Click to comment

Trending

Exit mobile version