ಆಳಂದ : ಮಳೆ ಬಿರುಗಾಳಿಗೆ ಶೆಡ್ ನೆಲಕ್ಕುರುಳಿದ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ನಿಂಬಾಳ ಗಡಿಯಲ್ಲಿ ನಡೆದಿದೆ.
ಅಂದ ಹಾಗೇ ನಿಂಬಾಳ ಗ್ರಾಮದಿಂದ ೨ಕಿ.ಮೀ ದೂರವಾದ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಆರೋಗ್ಯ ತಪಾಸಣೆಗಾಗಿ ಆರೋಗ್ಯ ಹಾಗೂ ಪೊಲೀಸರಿಗಾಗಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿತ್ತು.
ಆದರೆ ಕಳೆದ ರಾತ್ರಿ ಸುರಿದ ಮಳೆ-ಗಾಳಿಗೆ ಏಕಾಏಕಿ ಶೆಡ್ ಕಿತ್ತು ಹೋಗಿದ್ದು, ಸಿಬ್ಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸದ್ಯ ಶೆಡ್ ನೆಲಕ್ಕುರುಳಿದ ಬಳಿಕ ಸಿಬ್ಬಂದಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದ್ದು, ಗ್ರಾಮದ ಹತ್ತಿರ ಇರುವ ಸರಕಾರಿ ವಸತಿ ನಿಲಯದ ಹತ್ತಿರ ಸ್ಥಳಾಂತರಕ್ಕೆ ಒತ್ತಾಯ ಮಾಡಲಾಗಿದೆ.
ರಾಜಕುಮಾರ್ ಆಳಂದ ಎಕ್ಸ್ ಪ್ರೆಸ್ ಟಿವಿ (ಕಲಬುರಗಿ)