ಆರೋಗ್ಯ / HEALTH

ಕರ್ತವ್ಯ ನಿರತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆ

Published

on

ತಿಪಟೂರು(ತುಮಕೂರು): ತಿಪಟೂರು ತಾಲ್ಲೂಕಿನ ಗುರುಗದಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ನೀರು ವಿತರಕನ ಮೇಲೆ ಹಲ್ಲೆ ಮಾಡಿ,ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಗುರುಗದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಂದ ಹಾಗೇ ಗುರುಗದಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಕರ್ ಬಿಲ್ಲೂರು ಹಾಗೂ ನೀರುಗಂಟಿ ಯೋಗೀಶಯ್ಯ ಅವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಸದ್ಯ ಗ್ರಾಮದ ರಘು ಹಲ್ಲೆ ನಡೆಸಿದ್ದಾರೆ ಎಂದು ಪಿಡಿಒ ದೂರಿದ್ದಾರೆ.
ಇನ್ನು ರಘು ಎಂಬಾತ ಸಾರ್ವಜನಿಕ ನಲ್ಲಿಗೆ ಮೋಟರ್ ಅಳವಡಿಸಿ, ನೀರು ಪಡೆಯುತ್ತಿದ್ದ.ಹೀಗಾಗಿ ಈ ರೀತಿ ಮೋಟಾರನ್ನು ಅಳವಡಿಸಿದರೆ ಮುಂದಿನ ಮನೆಗಳ ನೀರು ಸರಬರಾಜಿಗೆ ಅಡಚಣೆ ಆಗಲಿದೆ. ಕೂಡಲೇ ಮೋಟಾರ್ ತೆರವುಗೊಳಿಸಿ ವಶಕ್ಕೆ ತೆಗೆದುಕೊಳ್ಳಲು ಪಿಡಿಒ ಮುಂದಾಗಿದ್ದಾರೆ.
ಆದರೆ ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಗ್ರಾಮದ ರಘು,ಪಿಡಿಒ ಮತ್ತು ನೀರುಗಂಟಿಯ ಮೇಲೆ ಹಲ್ಲೆ ಮಾಡಿ ನಿಂದಿಸಿದ್ದಾರೆ.ಹಲ್ಲೆಗೊಳಗಾದ ಪಿಡಿಒ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬAಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿ.ಎನ್.ಸಿದ್ದೇಶ್ವರ್ ಎಕ್ಸ್ ಪ್ರೆಸ್ ಟಿವಿ ತಿಪಟೂರು(ತುಮಕೂರು)

Click to comment

Trending

Exit mobile version