ಆರೋಗ್ಯ / HEALTH

ನೀರಲಕೇರಿ ಗ್ರಾ.ಪಂ.ನಲ್ಲಿ ಕಾರ್ಮಿಕರ ದಿನಾಚರಣೆ

Published

on

ಲಿಂಗಸೂಗೂರು(ರಾಯಚೂರು):ಲಿAಗಸೂಗೂರು ತಾಲೂಕಿನ ನೀರಲಕೇರಿ ಗ್ರಾ.ಪಂ.ನಲ್ಲಿ ಚಿತ್ರನಾಳ ಗ್ರಾಮದ ಮನ್ರೇಗಾ ಕೂಲಿ ಕಾರ್ಮಿಕರೊಂದಿಗೆ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.
ಈ ವೇಳೆ ಜಗದ್ಗುರು ಬಸವಣ್ಣ ಹಾಗೂ ಮಹಾತ್ಮ ಗಾಂಧೀಜಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಇನ್ನು ಕಾರ್ಯಕ್ರಮದಲ್ಲಿ ತಾ.ಪಂ.ಇಓ ಪಂಪಾಪತಿ ಹಿರೇಮಠ ಮಾತನಾಡಿ,ಕಾರ್ಮಿಕರ ದಿನಾಚರಣೆಯ ಮಹತ್ವ,ಕಾರ್ಮಿಕರ ದುಡಿಮೆಯ ಮಹತ್ವ,ಉದ್ಯೋಗ ಖಾತ್ರಿ ಯೋಜನೆಯ ಉದ್ದೇಶ,ಕೂಲಿ ಅನುಕೂಲತೆ ಹಾಗೂ ಕೊರೊನಾ ಕುರಿತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ನೀರಲಕೇರಿ ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಶಶಿಕಲಾ ಪಾಟೀಲ್,ರವಿ ಕಿರಣ್ ಹಾಜರಿದ್ದರು.ಬಳಿಕ ಕೂಲಿ ಕಾರ್ಮಿಕರಿಗೆ ಸಿಹಿ ತಿನಿಸು ಹಂಚಲಾಯಿತು.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು(ರಾಯಚೂರು)

Click to comment

Trending

Exit mobile version