ಆರೋಗ್ಯ / HEALTH

ಒಕ್ಕಲಿಗ ಸಮಾಜದಿಂದ ಆಹಾರ ಕಿಟ್ ವಿತರಣೆ..

Published

on

ನಂಜನಗೂಡು(ಮೈಸೂರು): ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದ ಬಡವರಿಗೆ ನಂಜನಗೂಡಿನ ಒಕ್ಕಲಿಗ ಸಮಾಜದ ವತಿಯಿಂದ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಯಿತು
ಪಟ್ಟಣದ ಚಾಮಲಾಪುರ ಬೀದಿಯಲ್ಲಿರುವ ಶ್ರೀರಾಮ ಮಂದಿರದ ಬಳಿ ಚಾಮಲಾಪುರ ಬೀದಿ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಬಡಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.
ಇನ್ನು ಬಡವರು,ಕೂಲಿ ಕಾರ್ಮಿಕರು,ವೃದ್ಧರಾದಿಯಾಗಿ ಸಾವಿರಾರು ಮಂದಿ ಸರದಿ ಸಾಲಿನಲ್ಲಿ ನಿಂತು ಆಹಾರ ಪದಾರ್ಥಗಳನ್ನು ಪಡೆದರು.
ಒಕ್ಕಲಿಗ ಸಮಾಜದ ಮುಖಂಡರೂ ವರ್ತಕರ ಸಂಘದ ಅಧ್ಯಕ್ಷ ಗೋವಿಂದರಾಜ್,ಪುರಸಭೆ ಮಾಜಿ ಅಧ್ಯಕ್ಷ ಶ್ರೀಧರ,ಮುಖಂಡರಾದ ಮಧುಸೂದನ್,ಚಂದ್ರು ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ಮುಖಂಡ ಗೋವಿಂದರಾಜ್ ಮಾತನಾಡಿ,ಶ್ರೀ ನಂಜುAಡೇಶ್ವರ ಕೋರೋನದಿಂದ ಮುಕ್ತಿ ನೀಡಿ ಎಲ್ಲರನ್ನೂ ಹಸಿವು ಮುಕ್ತರನ್ನಾಗಿಸುವ ಶಕ್ತಿ ನೀಡಲಿ ಎಂದರು.

ಮೋಹನ್ ಹುಲ್ಲಹಳ್ಳಿ ಎಕ್ಸ್ ಪ್ರೆಸ್ ಟಿವಿ ನಂಜನಗೂಡು(ಮೈಸೂರು)

Click to comment

Trending

Exit mobile version