ತಿಪಟೂರು(ತುಮಕೂರು): ಪತಿಯ ಮೇಲೆ ಪತ್ನಿಯೇ ಬಿಸಿ ಬಿಸಿ ಮಟನ್ ಸಾಂಬಾರ್ ಸುರಿದು ಹಲ್ಲೆಗೆ ಯತ್ನಿಸಿದ ಘಟನೆ ತಾಲ್ಲೂಕಿನ ರಂಗಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ರ0ಗಾಪುರ ಗ್ರಾಮದ ವ್ಯಕ್ತಿ ಗಂಗಾಧರ್ (೫೫) ಹಲ್ಲೆಗೊಳಗಾದ ಪತಿ.ಈತನ ಮೇಲೆ ಪತ್ನಿ ತಾರಾ ಸಾಂಬಾರ್ ಸುರಿದು ಹಲ್ಲೆಗೆ ಯತ್ನಿಸಿದ್ದಾಳೆ.
ಅಂದ ಹಾಗೇ ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಗಂಗಾಧರ್ ಹಾಗೂ ತಾರಾ ವಿವಾಹವಾಗಿದ್ದು,ಅಲ್ಲಿಂದಲೂ ತನ್ನ ಪತಿಗೆ ತಾರಾ ಕಿರುಕುಳ ನೀಡುತ್ತಿದ್ದಳು.ಆದರೆ ಇದನೆಲ್ಲಾ ಸಹಿಸಿಕೊಂಡ ಗಂಗಾಧರ್ ಮನೆ ಬಿಟ್ಟು ಹೋಗದೇ ಹೆಂಡ್ತಿ ಕಾಟ ಸಹಿಸಿಕೊಂಡು ಸುಮ್ಮನಿದ್ದ.
ಆದರೆ ಕಳೆದ ರಾತ್ರಿ ಮಾತ್ರ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಊಟಕ್ಕೆ ಕುಳಿತ್ತಿದ್ದ ಗಂಗಾಧರ್ನ ಮೇಲೆ ಪತ್ನಿ ತಾರಾ ಬಿಸಿ ಬಿಸಿಯಾದ ಮಟನ್ ಸಾಂಬಾರ್ ಸುರಿದು ಹಲ್ಲೆ ಮಾಡಲು ಯತ್ನಿಸಿದ್ದಾಳೆ. ಹೀಗಾಗಿ ಘಟನೆಯಲ್ಲಿ ಗಂಗಾಧರ್ಗೆ ಮುಖ ಸೇರಿದಂತೆ ದೇಹದ ಕೆಲವು ಭಾಗಗಳು ಸುಟ್ಟು ಹೋಗಿದ್ದು, ಆತನೀಗ ತಿಪಟೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಗಂಗಾಧರ್,ಕೊರೊನಾಗಿAತ ಮಹಾಮಾರಿಯಾಗಿರುವ ಈ ಕೊಲೆ ಪಾತಕಿ ಹೆಂಡತಿಯ ಜೊತೆ ನಾನು ಹೇಗೆ ಸಂಸಾರ ನಡೆಸುವುದು ಎಂಬ ಭಯ ನನ್ನಲ್ಲಿ ಕಾಡುತ್ತಿದೆ ಎಂಬುದಾಗಿ ಅವಲತ್ತುಕೊಂಡಿದ್ದಾನೆ.
ಸದ್ಯ ಈ ಸಂಬAಧ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದೇಶ್ವರ್ ಎಕ್ಸ್ ಪ್ರೆಸ್ ಟಿವಿ ತಿಪಟೂರು(ತುಮಕೂರು)