ಕರ್ನಾಟಕದಿಂದ ರಾಜ್ಯಸಭಾ ಸಂಸದರಾಗಿ ಆಯ್ಕೆಯಾದ ಭಾರತೀಯ ಜನತಾ ಪಕ್ಷದ ಅಶೋಕ ಗಸ್ತಿ ಇಂದು ನವದೆಹಲಿ,ರಾಜ್ಯಸಭೆಯ ಸಭಾ ಕೊಠಡಿಯಲ್ಲಿ 11:00 ಗಂಟೆಗೆ ನೂತನವಾಗಿ ರಾಜ್ಯಸಭೆ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.ಅಶೋಕ ಗಸ್ತಿ ಪ್ರಮಾಣ ವಚನ ನಡೆಯುತ್ತಿದ್ದಂತೆಯೇ ಗಸ್ತಿ ಅವರ ತವರು ಕ್ಷೇತ್ರದ ಜಿಲ್ಲೆಯ ಲಿಂಗಸುಗೂರ ತಾಲ್ಲೂಕಿನ ಬಿಜೆಪಿ ಮುಖಂಡರು,ಕಾರ್ಯಕರ್ತರು,ಹಾಗೂ ಸವಿತಾ ಸಮಾಜದ ಬಳಗದಿಂದ ಪಟಾಕಿ ಸಿಡಿಸಿ ಸಿಹಿ ಹಂಚುವುದರ ಮೂಲಕ ಸಂಭ್ರಮಾಚರಣೆ ಮಾಡಿದ್ದು,ಸಂಭ್ರಮದಲ್ಲಿ ಮನೋಹರ ರೆಡ್ಡಿ,ಶಶಿಕಾಂತ ಗಸ್ತಿ,ಶಿವಪ್ರಕಾಶ, ಅಶೋಕ ದಿಗ್ಗಾವಿ,ವೀರಭದ್ರಯ್ಯ ವಸ್ತ್ರದ ಮತ್ತಿತರರು ಭಾಗಿಯಾಗಿದ್ದರು….