ಶಿರಾ:ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಕುಂಬಾರಳ್ಳಿಯಲ್ಲಿ ಹುಲ್ಲು ಮತ್ತು ನೀರನ್ನು ಅರಸಿ ನಾಡಿಗೆ ಬಂದಿದ್ದ ಕಡವೆ ಮೇಲೆ ನಾಯಿಗಳು ಮಾಂಸಕಾಗಿ ದಾಳಿ ನಡೆಸಿದೆ. ದೂರದಿಂದ ಇದನ್ನು ಕಂಡ ಜೆ.ಡಿ.ಯು ಕಾರ್ಯಕರ್ತ ಪವನ್ ಗೌಡ ನಾಯಿಗಳನ್ನು ಓಡಿಸಿ ಗಾಯಗೊಂಡ ಕಡವೆಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ, ಪತ್ರಕರ್ತ ಲಿಂಗದಹಳ್ಳಿ ಚೇತನ್ ಕುಮಾರ್ ರ ಮೂಲಕ ಶಿರಾ ಅರಣ್ಯ ಇಲಾಖೆಯವರಿಗೆ ಫೋನ್ ಮಾಡಿ ಕಡವೆಯನ್ನು ಅರಣ್ಯ ಇಲಾಖೆಗೆ ಒಪ್ಪಿಸಿ ಮನವೀಯತೆ ಮೆರೆದಿದ್ದಾರೆ