Connect with us

ಮಂಡ್ಯ

ಹೇಳಿದ್ದು 15 ಲಕ್ಷ, ಕೊಟ್ಟಿದ್ದು ಕೇವಲ 5 ಲಕ್ಷ. ಮಾತು ಮರೆತ ಸರ್ಕಾರ…!

Published

on

ನಾಗಮಂಗಲ: ಒಂದೇ ಕುಟುಂಬದ ಮೂವರು ಜಲಸಮಾಧಿಯಾದ ಘಟನೆಗೆ ಮುಖ್ಯಮಂತ್ರಿಗಳ ಪರಿಹಾರನಿಧಿಯಿಂದ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು 15 ಲಕ್ಷ ರೂಪಾಯಿ, ಆದರೆ ಕೊಟ್ಟಿದ್ದು ಮಾತ್ರ ಕೇವಲ 5 ಲಕ್ಷ ರೂಪಾಯಿಯಂತೆ,ಈ ಘಟನೆಗೆ ನಡೆದಿರುವುದು ಮುಖ್ಯಮಂತ್ರಿಗಳ ತವರು ಜಿಲ್ಲೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿಯ ಬೀರನಹಳ್ಳಿಯಲ್ಲಿ.
ಕಳೆದೆರಡು ತಿಂಗಳ ಹಿಂದೆ ಜೂ.14 ರಂದು ಬೀರನಹಳ್ಳಿ ಗ್ರಾಮದ ನರಸಿಂಹಯ್ಯ ಎಂಬುವರ ಪತ್ನಿ ಗೀತಾ ಹಾಗೂ ಮಕ್ಕಳಾದ ಸವಿತಾ ಮತ್ತು ಸೌಮ್ಯ ಎಂಬ ಮೂವರು ಆಕಸ್ಮಿಕ ಕಾಲು ಜಾರಿ ಜಲಸಮಾಧಿಯಾಗಿದ್ದರು. ಈ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಜೂ.15 ರಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಿ.ಎಂ.ಯಡಿಯೂರಪ್ಪ ತಲಾ ರೂ.05 ಲಕ್ಷದಂತೆ 15 ಲಕ್ಷ ರೂ.ಗಳನ್ನು ಘೋಷಣೆ ಮಾಡುವ ಮೂಲಕ ಆದೇಶ ಹೊರಡಿಸಿದ್ದರು. ಈ ಸಂಬಂಧ ಜೂ.16 ರಂದು ಮಂಡ್ಯ ಜಿಲ್ಲಾಧಿಕಾರಿಗಳು ಹಾಗೂ ತಾಲ್ಲೂಕು ದಂಡಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡುವ ಮೂಲಕ ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಿ ರಾಜ್ಯ ಸರ್ಕಾರದ ಪರಿಹಾರ ಧನಸಹಾಯದ ವಿಷಯವನ್ನು ತಿಳಿಸಿದ್ದರು. ಆದರೆ ತಹಸೀಲ್ದಾರ್ ಕಚೇರಿಯ ದೂರವಾಣಿ ಕರೆಯಂತೆ ತಾಲೂಕು ದಂಡಾಧಿಕಾರಿಗಳಿಂದ ಕೇವಲ 05 ಲಕ್ಷ ರೂ.ಗಳ ಚೆಕ್ ಸ್ವೀಕರಿಸಿದ ನರಸಿಂಹಯ್ಯ ತಬ್ಬಿಬ್ಬಾಗಿದ್ದಾರೆ. ವಿಷಯ ತಿಳಿದು ಪಟ್ಟಣದ ಮಿನಿವಿಧಾನಸೌಧದ ಆವರಣಕ್ಕೆ ಆಗಮಿಸಿದ ಸ್ಥಳೀಯ ನಾಗರೀಕರು ಮತ್ತು ಮುಖಂಡರು ರಾಜ್ಯ ಸರ್ಕಾರದ ವಿರುದ್ದ, ನೊಂದ ಕುಟುಂಬಕ್ಕೆ ನೀಡಿರುವ ಮಾತಿನಂತೆ ಮುಖ್ಯಮಂತ್ರಿಗಳು ತಲಾ ರೂ.05 ಲಕ್ಷದಂತೆ 15 ಲಕ್ಷ ರೂಗಳ ಪೈಕಿ ಉಳಿಕೆ 10 ಲಕ್ಷ ರೂಗಳನ್ನು ಪರಿಹಾರವಾಗಿ ನೀಡಬೇಕು. ಇಲ್ಲವಾದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಮುಖ್ಯಮಂತ್ರಿಗಳ ಕಚೇರಿಯ ಮುಂದೆ ನೊಂದ ಕುಟುಂಬದೊಂದಿಗೆ ಧರಣಿ ನಡೆಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.ನೊಂದ ನರಸಿಂಹಯ್ಯ ಮಾತನಾಡಿ, ಹೆಂಡತಿ ಮಕ್ಕಳನ್ನು ಕಳೆದುಕೊಂಡಿದ್ದ ನನ್ನ ಮನೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳ ಮತ್ತು ತಹಸೀಲ್ದಾರ್ ರವರ ಸಾಂತ್ವಾನದ ಮಾತಿನೊಂದಿಗೆ ರಾಜ್ಯ ಸರ್ಕಾರ ಘೋಷಿಸಿರುವ 15 ಲಕ್ಷದ ವಿಷಯ ಕೇಳಿ ಸಮಾದಾನವಾಗಿತ್ತು. ಉಳಿದಿಬ್ಬರು ಮಕ್ಕಳ ಭವಿಷ್ಯದ ಕನಸು ಕಂಡಿದ್ದ ನನಗೆ 05 ಲಕ್ಷ ರೂ.ಗಳ ಚೆಕ್ ನೋಡಿ ಬೇಸರವಾಗಿದೆ. ದಯವಿಟ್ಟು ಮುಖ್ಯಮಂತ್ರಿಗಳು ನೀಡಿರುವ ಆದೇಶದಂತೆ ಉಳಿದ 10 ಲಕ್ಷ ರೂ.ಗಳ ಪರಿಹಾರ ನೀಡುವ ಮೂಲಕ ನನ್ನ ಕುಟುಂಬದ ಆಸರೆಯಾಗಲಿ ಎಂಬುದು ನನ್ನ ಮನವಿ ಎಂದರು. ಈ ಸಂದರ್ಭ ಎಪಿಎಂಸಿ ಮಾಜಿ ಅಧ್ಯಕ್ಷ ಚೆನ್ನಪ್ಪ, ಮುಖಂಡರಾದ ಕಲ್ಲೇನಹಳ್ಳಿ ದಿನೇಶ್ ಹಾಗೂ ನೆರಲಕೆರೆ ರಾಮು ಸೇರಿದಂತೆ ಮತ್ತಿತರರು ಇದ್ದರು. ಇನ್ನೂ ನಾಳೆ ಜಿಲ್ಲೆಯ ಜೀವನಾಡಿ ಕೆಆರ್‍ಎಸ್‍ಗೆ ಭಾಗೀನ ಅರ್ಪಿಸಲು ಆಗಮಿಸುತ್ತಿರುವ ಮುಖ್ಯಮಂತ್ರಿಗಳು ಈ ವಿಷಯದ ಬಗ್ಗೆ ಎಚ್ಚೆತ್ತು, ಕೂಡಲೇ ಕೊಟ್ಟ ಮಾತಿನಂತೆ ಉಳಿಕೆ 10 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುವ ಮೂಲಕ ನೊಂದ ಕುಟುಂಬದ ಆಸರೆಯಾಗಲಿ ಎಂಬುದು ನಮ್ಮ ಆಶಯ…

ವರದಿ- ಎಸ್.ವೆಂಕಟೇಶ್.
ಎಕ್ಸ್ ಪ್ರೆಸ್ ಟಿವಿ
ನಾಗಮಂಗಲ.

Continue Reading
Click to comment

Leave a Reply

Your email address will not be published. Required fields are marked *

ಮಂಡ್ಯ

ಕನ್ನಡ ಸಾಹಿತ್ಯ ಪರಿಷತ್ತಿಗೆ 2021 ರಲ್ಲಿ ನಡೆಯಲಿರುವ ಕಸಪಾ ಚುನಾವಣೆ ಪ್ರಚಾರ..!

Published

on

By

ಮಳವಳ್ಳಿ: ಕನ್ನಡ ಸಾಹಿತ್ಯ ಪರಿಷತ್ತಿಗೆ 2021 ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ವರ್ಧಿಸಲಿರುವ ಚನ್ನೇಗೌಡರು ಮಳವಳ್ಳಿ ಪಟ್ಟಣದ ವಿಶ್ವ ಮಾನವ ವಿಚಾರ ವೇದಿಕೆ ಕಚೇರಿಗೆ ಇಂದು ಭೇಟಿ ನೀಡಿದರು. ಇದೇ ವೇಳೆ ಚನ್ನೇಗೌಡರವರು ಮಾತನಾಡಿ, ಕಸಪಾದಲ್ಲಿ ಮತ್ತಷ್ಟು ಸುಧಾರಣೆಯಾಗಬೇಕಾಗಿದೆ. ಕನ್ನಡ ಪರ ಸಂಘಟನೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಗೆ ಸೇರಿಸಿಕೊಂಡು ಕನ್ನಡ ಪರ ಹೋರಾಟ ಮಾಡಬೇಕಾಗಿದೆ. ಇದಲ್ಲದೆ ಕನ್ನಡವನ್ನು ಉಳಿಸಬೇಕಾಗಿದೆ ಎಂದರು. ಇನ್ನೂ ಯುವ ಬರಹಗಾರರಗಳನ್ನು ಹೊರತರುವ ಕೆಲಸವನ್ನು ಕಸಪಾ ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ನಿಲುವುಗಳನ್ನು ಮುಂದೆ ಇಟ್ಟುಕೊಂಡು ನಾನು ಚುನಾವಣೆಯಲ್ಲಿ ಸ್ವರ್ಧಿಸುತ್ತಿದ್ದೇನೆ ಎಂದರು. ಈ ಭಾರಿ ನನ್ನನ್ನು ಆಯ್ಕೆ ಮಾಡಲು ನಿಮ್ಮ ಸಹಕಾರ ಬೇಕು. ಇದಲ್ಲದೆ ನಾನು ಸಹ ಮಂಡ್ಯ ಜಿಲ್ಲೆಯವನು ಕಸಪಾ ಪ್ರಗತಿಗೆ ನಾವೆಲ್ಲರೂ ಒಟ್ಟಾಗಿ ಅಭಿವೃದ್ಧಿ ಪಡಿಸೋಣ ಎಂದರು.ಇನ್ನೂ ಈ ಕಾರ್ಯಕ್ರಮದಲ್ಲಿ ವಿಶ್ವಮಾನವ ವಿಚಾರ ವೇದಿಕೆ ಅಧ್ಯಕ್ಷ ಮ.ಸಿ ನಾರಾಯಣ, ಪ್ರಧಾನ ಕಾರ್ಯದರ್ಶಿ ನಾಗೇಶ್, ಖಜಾಂಚಿ ಡಾ.ಮಹದೇವ, ಕಸಪಾ ತಾಲ್ಲೂಕು ಅಧ್ಯಕ್ಷ ದೇವರಾಜು, ಪ್ರಾಂತ ರೈತ ಸಂಘದ ಅಧ್ಯಕ್ಷ ಭರತ್ ರಾಜ್ ಇದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Continue Reading

ಮಂಡ್ಯ

ಬಿಜೆಪಿ ಅಧ್ಯಕ್ಷ ನಂಜುಂಡೇಗೌಡರ ವಿರುದ್ಧ ಗುಡುಗಿದ ರೈತ ಸಂಘದ ಅಧ್ಯಕ್ಷ ಎನ್ಎಲ್ ಭರತ್ ರಾಜ್..!

Published

on

By

ಮಳವಳ್ಳಿ: ತನ್ನನ್ನು ತಾನು ಬಿಜೆಪಿಗೆ ಮಾರಿಕೊಂಡಿರುವ ನಂಜುಂಡೇಗೌಡರು ರೈತರ ಬಗ್ಗೆ ಮಾತನಾಡುವ ಯಾವ ನೈತಿಕತೆಯನ್ನೂ ಉಳಿಸಿಕೊಂಡಿಲ್ಲ ಹಾಗೂ ರೈತರ ಪ್ರತಿನಿಧಿಯಾಗಲು ಯೋಗ್ಯತೆ ಇಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ಎಲ್ ಭರತ್ ರಾಜ್ ಆರೋಪಿಸಿದ್ದಾರೆ. ಮಳವಳ್ಳಿಯ ಪ್ರಾಂತ ರೈತ ಸಂಘದ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಚಾರಿತ್ರಿಕ ವಾದದ್ದು, ಸ್ವಾತಂತ್ರ್ಯ ಚಳುವಳಿಯ ನಂತರದ ಧೀರೋದ್ಧಾತ ಹಾಗೂ ಐತಿಹಾಸಿಕವಾದ ಚಳುವಳಿಯನ್ನು ದಲ್ಲಾಳಿಗಳ ಹೋರಾಟ ಎಂದು ನಂಜುಂಡೇಗೌಡರು ಕರೆದಿರುವುದು ಅವರು ಬಿಜೆಪಿ ಗುಲಾಮರಾಗಿರುವುದಕ್ಕೆ ಸಾಕ್ಷಿಯಾಗಿದೆ. ರೈತ ಸಂಘಟನೆಯ ಮೂಲಕ ಬೆಳೆದು ಬಂದು ತನ್ನ ಬೆಳೆಸಿದ ರೈತ ಕುಲಕ್ಕೆ ವಿಷ ಉಣಿಸುತ್ತಿದ್ದಾರೆ, ಅವರ ನೆಚ್ಚಿನ ನಾಯಕ ನರೇಂದ್ರ ಮೋದಿ ಅದಾನಿಯ, ಅಂಬಾನಿಯ ಗುಲಾಮನಾಗಿ ರೈತ ವಿರೋಧಿ ವಿದ್ಯುತ್ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯಿದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಯಾವ ಸದನಗಳಲ್ಲೂ ಚರ್ಚಿಸದೆ, ಚಳಿಗಾಲದ ಸಂಸತ್ ಅಧಿವೇಶನವನ್ನು ರದ್ದು ಪಡಿಸಿ ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು. ಮೋದಿ ಪ್ರಜಾಪ್ರಭುತ್ವದ ಕೊಲೆಗಾರ ಭಾರತದ ದಿವಾಳಿಕೋರ, ಬಂಡವಾಳ ಶಾಹಿಗಳ ದಾಸಾನುದಾಸ, ಕೃಷಿ ವಲಯ ಕೈಗಾರಿಕಾ ವಲಯಗಳನ್ನ ಹಾಳು ಮಾಡಿ ಬಡತನ ನಿರುದ್ಯೋಗ ಅಸಮಾನತೆ ಅಸಹಿಷ್ಣುತೆಯನ್ನ ಹುಟ್ಟುಹಾಕಿರುವ ಗೋಮುಖ ವ್ಯಾಘ್ರನನ್ನ ನಂಜುಂಡೆಗೌಡರು ಸಮರ್ಥಿಸಿಕೊಳ್ಳುವುದು ರೈತ ದ್ರೋಹಿ ಕೆಲಸವಾಗಿದೆ ಇದೇ ನೀತಿಗಳನ್ನು ವಿರೋಧಿಸಿ ರಾಜ್ಯ ರೈತ ಸಂಘದಲ್ಲಿದ್ದಾಗ ಮೂರ್ನಾಲ್ಕು ದಶಕಗಳ ಕಾಲ ಹೋರಾಟ ಮಾಡಿರುವುದನ್ನು ಮರೆತು ಮಾತನಾಡುತ್ತಿದ್ದಾರೆ ನಿಮಗೆ ಕಿಂಚಿತ್ತಾದರೂ ಸ್ವಾಭಿಮಾನವಿದ್ದರೆ ತನ್ನನ್ನು ಬೆಳೆಸಿದ ರೈತರಿಗೆ ದ್ರೋಹ ಬಗೆಯದೆ ಹಸಿರು ಟವಲ್ ನ್ನು ಬಿಜೆಪಿಗೆ ಒತ್ತೆ ಇಡದೆ ಸಾಮಾನ್ಯ ಮನುಷ್ಯನಾಗಿ ಬಾಳಿ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಒತ್ತಾಯಿಸುತ್ತದೆ ಎಂದರು ಇನ್ನೂ ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ರೈತ ಸಂಘ ಪ್ರಧಾನ ಕಾರ್ಯದರ್ಶಿ ಲಿಂಗರಾಜುಮೂರ್ತಿ, ಆನಂದ್ ಚಿಕ್ಕಮೊಗಣ್ಣ ಸಿದ್ದೇಗೌಡ ದಾಸಬೋವಿ, ಕರಿಯಪ್ಪ, ಭಾಗವಹಿಸಿದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Continue Reading

ಮಂಡ್ಯ

ಕುವೆಂಪು ದಿನಾಚರಣೆ ಹಾಗೂ ದಿನಶೀರ್ಷಿಕೆ ಬಿಡುಗಡೆ..!

Published

on

By

ಮಳವಳ್ಳಿ: ವಿಶ್ವ ಮಾನವ ವಿಚಾರ ವೇದಿಕೆ ವತಿಯಿಂದ ಕುವೆಂಪುರವರ 116 ನೇ ವರ್ಷ ಜನ್ಮ ದಿನಾಚರಣೆ ಹಾಗೂ ದಿನ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮವನ್ನು ಮಳವಳ್ಳಿ ಪಟ್ಟಣದ ವಿಶ್ವ ಮಾನವ ವಿಚಾರ ವೇದಿಕೆ ಕಚೇರಿಯ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಪುರಸಭಾಧ್ಯಕ್ಷೆ ರಾಧ ನಾಗರಾಜುರವರು ಉದ್ಘಾಟಿಸಿದರು.ಇದೇ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿರವರು ಮಾತನಾಡಿ ವಿಚಾರವಂತರ ನಡುವೆ ನಾವೆಲ್ಲ ಇದ್ದೇವೆ ಎನ್ನುವುದೇ ಸಮಾದಾನದ ಸಂಗತಿ,ವಿಚಾರವಂತರಿಗೆ ತೊಂದರೆ ತಪ್ಪಿದ್ದಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ಇನ್ನೂ ಇದೇ ವೇಳೆ ಹಂದಿನಾಗಣ್ಣ, ಸಿಐಟಿಯು ರಾಜ್ಯ ಕಾರ್ಯದರ್ಶಿ ಜಿ.ರಾಮಕೃಷ್ಣ, ಹಿರಿಯ ರಂಗಕಲಾವಿದ ಪುಟ್ಟಸ್ವಾಮಾಚಾರ್ಯ,ಜಯರಾಜು ರವರನ್ನು ಸನ್ಮಾನಿಸಲಾಯಿತು. ಇನ್ನೂ ಕಾರ್ಯಕ್ರಮದಲ್ಲಿ ವಿಶ್ವ ಮಾನವ ವಿಚಾರ ವೇದಿಕೆ ಅಧ್ಯಕ್ಷ ಮ.ಸಿ ನಾರಾಯಣ, ಪ್ರಧಾನ ಕಾರ್ಯದರ್ಶಿ ನಾಗೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪುಟ್ಟಸ್ವಾಮಿ, ನಾಗರಾಜು, ವಿಶ್ವಗುರು ಸೊಸೈಟಿ ಅಧ್ಯಕ್ಷ ಕೃಷ್ಣಶೆಟ್ಟಿ, ಭರತ್ ರಾಜ್ ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Continue Reading

Trending

Copyright © 2023 EXPRESS TV KANNADA

canlı maç izle selcuksports deneme bonusu deneme bonusu veren siteler bahis siteleri jojobet Hack forumPHP Shell indiryaş sınırı olmayan bahis sitelerikareasbetsiyah bayrak ayna amirkareasbet girişbetingo güncel girişdizimatgobahis girişasper casino girişbakırköy escortdeneme bonusu veren sitelerbahis forumkareasbetBitcoin Kabul Eden Bahis Sitelerigüvenilir casino siteleriGüvenilir poker siteleriSüper Ligyabancı dizitürbanlı escortFındıkzade Escortesbet girişbullbahis girişbullbahisbullbahisbenimbahis girişbenimbahisCasibom güncel girişcasino siteleriizmir escortBakırköy EscortAnkara Travestiizmir travestiesenyurt escortistanbul escortbeylikdüzü escortbeylikduzu escortbeylikduzu escortbahceşehir escortbeylikdüzü escortesenyurt escortbeylikdüzü escortbeylikdüzü escortistanbul escortmariobet girişbetkom giriştipobet girişbetkomtarafbettarafbettarafbetbetkombetturkey girişbetturkey girişbetturkey twittersahabetmariobet güncel girişmariobet30 TL Bonus Veren Bahis Siteleri betmatikmariobetonwinbetistsüpertotobetgrandpashabet telegramBetist Girişen iyi slot sitelerixslot giriş adresitipobet365ilk yatırım bonusu veren sitelerDeneme Bonusu Veren Siteler