ಹುಬ್ಬಳ್ಳಿ: ಕ್ಯಾನ್ಸರ್ ರೋಗಿಗಳ ಜೀವನದಲ್ಲಿ ಉತ್ಸಾಹ ತರುವ ನಿಟ್ಟಿನಲ್ಲಿ ಸೆ.22 ನ್ನು ವಿಶ್ವ ಗುಲಾಬಿ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದ್ದು, ಇದರ ಅಂಗವಾಗಿ ನಗರದ ರೌಂಡ್ ಟೇಬಲ್ ,ಮತ್ತು ಲೇಡಿಸ್ ಸರ್ಕಲ್ ವತಿಯಿಂದ ಕ್ಯಾನ್ಸರ್ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ ಆಚರಣೆ ಮಾಡಿದರು. ನವನಗರದಲ್ಲಿನ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿದ ಲೇಡಿಸ್ ಕ್ಲಬ್ ನ ಸದಸ್ಯರು ಅಲ್ಲಿನ ರೋಗಿಗಳನ್ನು ವಿಚಾರಿಸಿ ಕುಶಲೋಪರಿ ವಿಚಾರಿಸಿ ರೋಗಿಗಳಿಗೆ ಸೇಬು, ಬಾಳೆ,ಮೊಸಂಬಿ ಹಣ್ಣುಗಳನ್ನು ವಿತರಣೆ ಮಾಡಿ ಅವರಲ್ಲಿ ಆತ್ಮ ಸ್ಥೈರ್ಯ ತುಂಬಿದರು.ಇದೇ ವೇಳೆ ರೋಗಿಗಳಿಗೆ ಕ್ಯಾನ್ಸರ್ ಬಹುದೊಡ್ಡ ರೋಗ ಎಂದು ಪರಿಗಣಿಸಲಾಗುತ್ತದೆ ಆದರೆ ಕ್ಯಾನ್ಸರ್ ರೋಗ ಗುಣಪಡಿಸುವ ಎಲ್ಲಾ ಚಿಕಿತ್ಸೆಗಳು’ ಲಭ್ಯವಾಗಿತ್ತಿದ್ದು ರೋಗಿಗಳು ಭಯ ಪಡದೇ ರೋಗವನ್ನು ಗೆದ್ದಿದ್ದಾರೆ ಎಂದು ಜಾಗೃತಿ ಮೂಡಿಸಿದರು.ಇದೇ ಸಂದರ್ಭದಲ್ಲಿ ರೌಂಡ್ ಟೇಬಲ್ ಸಂಸ್ಥಾಪಕ ಹಿಮಾನುಶ್ ಕೊಠಾರಿ,ಮಾನಸಿ ಕೊಠಾರಿ, ಕುನಾಲ್ ಅಗರ್ ವಾಲ್, ಡಾ! ಉಮೇಶ್ ಹಳ್ಳಿಕೇರಿ ಸೇರಿದಂತೆ ಇತರರು ಇದ್ದರು..
ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ