Connect with us

ಲೈಫ್ ಸ್ಟೈಲ್

ಸಂಕ್ರಾಂತಿ ಹಬ್ಬಕ್ಕೆ ಹೆಂಗಳಿಯರ ಬೆರಳುಗಳ ಮೇಲೆ ಸಂಕ್ರಮಣ ಚಿತ್ತಾರ..!

Published

on

ಇನ್ನೇನು 2020 ವರ್ಷ ಮುಗಿದು 2021 ಹೊಸ ವರ್ಷವನ್ನು ಬರ ಮಾಡಿಕೊಳ್ಳಲು ಜನ್ರು ಕಾತುರರಾಗಿದ್ದಾರೆ.ವರ್ಷ ಪ್ರಾರಂಭದ ಮೊದಲನೇ ಹಬ್ಬ ಮಕರ ಸಂಕ್ರಾತಿ. ಹಬ್ಬ ಅಂದ್ಮೇಲೆ ಮನೆಯಲ್ಲಿ ಸಂಭ್ರಮ ಸಡಗರ ಮಾಮೂಲಿ ಅದರಲ್ಲೂ ವರ್ಷದ ಮೊದಲನೇ ಹಬ್ಬ ಅಂದ್ರೆ ಕೇಳ್ಬೇಕ ಮನೆಯ ಹೆಣ್ಣು ಮಕ್ಕಳಿಗೆ ಉಡುಗೆ ತೊಡುಗೆಯದ್ದೆ ಚಿಂತೆಯಾಗಿರುತ್ತೆ. ಇದರ ಜೊತೆಗೆ ಉಗುರುಗಳಿಗೆ ಯಾವ ರೀತಿಯ ಬಣ್ಣವನ್ನು ಹಾಕುವುದು ಡಿಸೈನ್ ಮಾಡೊದು ಅಂತಾ ಚಿಂತೆ ಮಾಡ್ತಾ ಇರುತ್ತಾರೆ. ಇತ್ತೀಚೆಗೆ ಎಲ್ಲಿ ನೋಡುದ್ರು ನೈಲ್ ಆರ್ಟ್ ನದ್ದೆ ಟ್ರೇಂಡ್. ಈ ಬಾರಿಯ ಮಕರ ಸಂಕ್ರಾತಿ ಹಬ್ಬಕ್ಕೆ ಡಿಫರೆಂಟ್ ಆಗಿರೊ ನೈಲ್ ಆರ್ಟ್ ಗಳು ಎಲ್ಲಾ ಹೆಂಗಳಿಯರ ಕೈ ಉಗುರುಗಳ ಮೇಲೆ ಚಿತ್ತಾರವಾಗಿ ರಾರಾಜಿಸುತ್ತಿದೆ.ನೂತನ ವರ್ಷದ ಮೊದಲ ಈ ಹಬ್ಬಕ್ಕೆ ನೈಲ್ ಆರ್ಟ್ ರಂಗೋಲಿ ಸಂಕ್ರಾಂತಿ ಸ್ಪೇಷಲ್ ಅನ್ನಿಸಿಕೊಂಡಿದೆ. ಇನ್ನು ನಾವು ಇಷ್ಟು ಡಿಫರೆಂಟ್ ಆಗಿರುವ ನೈಲ್ ಆರ್ಟ್ ಗಳನ್ನು ಡಿಸೈನ್ ಮಾಡಿಸಲು ಪಾರ್ಲರ್ ಗೆ ಹೊಗ ಬೇಕೆಂದೇನಿಲ್ಲಾ.ಬಣ್ಣಗಳ ಮಿಕ್ಸ್ ಮ್ಯಾಚ್ ಟೆಕ್ನಿಕ್ ಹಾಗೂ ಕ್ರಿಯೇಟಿವ್ ಡ್ರಾಯಿಂಗ್ ನಿಂದ ನಾವೇ ಸ್ವತಹ ಉಗುರುಗಳ ಮೇಲೆ ನೈಲ್ ಆರ್ಟ್ ರಂಗೋಲಿ ಬಿಡಿಸಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ದುಪ್ಪಟ್ಟು ಮಾಡಬಹುದು. ಕೈ ಉಗುರುಗಳ ಮೇಲೆ ಮೂಡಿರುವ ಪೊಂಗಲ್ ಹಬ್ಬ ಸಾರುವ ಸಾಂಕೇತಿಕ ಚಿತ್ರ ಹಾಗೂ ಪೊಂಗಲ್ ಪಾಟ್, ಕಬ್ಬು, ಹಸು,ಹ್ಯಾಪಿ ಪೊಂಗಲ್ ಶುಭಾಶಯವನ್ನು ತಿಳಿಸುವ ನೈಲ್ ಡಿಸೈನ್ ಸಂಕ್ರಾಂತಿ ಹಬ್ಬಕ್ಕೆ ಸಿಕ್ಕಾಪಟ್ಟೆ ಟ್ರೇಂಡ್ ಆಗಿದೆ. ಇದರ ಜೊತೆಗೆ ಗಾಳಿ ಪಟ ನೈಲ್ ಆರ್ಟ್ ಕೂಡ ಸಂಕ್ರಾಂತಿ ಹಬ್ಬದ ಸಂಕೇತವಾಗಿದೆ. ಐದು ಬೆರಳಿಗೆ ನೀಲಿ ಆಗಸದ ಬಣ್ಣ ತುಂಬಿ ನಡುವಿನ ಎರೆಡು ಬೆರಳುಗಳ ಮೇಲೆ ಗಾಳಿಪಟದ ಚಿತ್ರ ಬಿಡಿಸುವ ಡಿಸೈನ್ ಕೂಡ ಸೋಷಿಯಾಲ್ ಮೀಡಿಯಾದಲ್ಲಿ ಬಾರಿ ಸಂಚಲನ ಸೃಷ್ಟಿಸಿದೆ. ಸಂಕ್ರಮಣ ಕಾಲವನ್ನು ಬಿಂಬಿಸುವ ಕೇಸರಿ-ಕೆಂಪು, ಹಳದಿ-ಕಪ್ಪು ಕಾಂಬಿನೇಷನ್ ನ ಸೂರ್ಯೋದಯದ ನೈಲ್ ಆರ್ಟ್ ಈ ಹಬ್ಬಕ್ಕೆ ಮತ್ತಷ್ಟು ರಂಗು ತುಂಬಿರೊದೆಂತು ಸುಳ್ಳಲ್ಲ.ಸಂಕ್ರಾಂತಿಯ ಹಬ್ಬಕ್ಕೂ ರಂಗೋಲಿಗೂ ಇರುವ ಅವಿನಾಭಾವ ಸಂಬಂಧ ಕಲರ್ ಫುಲ್ ರಂಗೋಲಿ ನೈಲ್ ಆರ್ಟ್ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿದೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Continue Reading
Click to comment

Leave a Reply

Your email address will not be published. Required fields are marked *

ಲೈಫ್ ಸ್ಟೈಲ್

ದೇಹದ ದಣಿವು ನೀಗಿಸುವ ನೈಸರ್ಗಿಕ ಪಾನೀಯ…!

Published

on

By

ಎಳನೀರು ಯಾರಿಗೆ ಗೊತ್ತಿಲ್ಲ ಹೇಳಿ ಹಲವರಿಗೆ ಎಳನೀರು ಪ್ರಿಯವಾದ ಪಾನಿಯವಾಗಿದೆ. ನಾಲಿಗೆ ರುಚಿಗೆ ಎಳನೀರು ನೈಸರ್ಗಿಕವಾಗಿ ತಾಜಾವಾಗಿ ಸಿಗುವ ಪಾನೀಯವಾಗಿದೆ. ಇಂದಿನ ದಿನಗಳಲ್ಲಿ ಸಿಗುವ ರೆಡಿಮೇಡ್ ಪಾನಿಯಗಳಿಗಿಂತ ಎಳನೀರು ಉತ್ತಮವಾದ ಅಂಶವನ್ನು ಹೊಂದಿರುವುದಾಗಿದೆ. ಪುರಾತನ ಕಾಲದಿಂದಲೂ ಬೇಡಿಕೆ ಹೆಚ್ಚಾಗಿಸಿ ಕೊಂಡಿರುವ ಈ ಪಾನೀಯ ಯಾವುದೇ ತಂಪು ಪಾನೀಯಗಳಿಗಿಂತಲೂ ತಾನೇನೂ ಕಮ್ಮಿ ಇಲ್ಲಾ ಎಂಬ ರೀತಿಯಲ್ಲಿ ತನ್ನ ವರ್ಚಸ್ಸ್ ಅನ್ನು ಕಾಪಾಡಿಕೊಂಡು ಬಂದಿದೆ. ಸಕ್ಕರೆ ಖನಿಜ ಮತ್ತು ಲವಣಾಂಶ ಅಧಿಕವಾಗಿದ್ದು ದೇಹದ ನಿಶಕ್ತಿಯನ್ನು ಹೋಗಲಾಡಿಸಲು ಇದು ಬಹಳ ಉಪಯುಕ್ತವಾಗಿದೆ.. ದೇಹದಲ್ಲಿ ನೀರಿನಂಶ ಕಡಿಮೆ ಇದ್ದರೆ ಹಾಗೂ, ತೀವ್ರ ನಿಶಕ್ತಿ ಸಮಸ್ಯೆಯಿಂದ ಬಳಲುವವರಿಗೆ ಈ ಪಾನೀಯ ಅಗತ್ಯವಾಗಿದೆ.ವಯಸ್ಸಾಗುವಿಕೆ, ಚರ್ಮಸುಕ್ಕುಗಟ್ಟುವಿಕೆ ಮೊದಲಾದ ಸಮಸ್ಯೆಗಳನ್ನು ದೂರ ಮಾಡುವ ಅಂಶನ್ನು ಈ ಎಳನೀರು ಒಳಗೊಂಡಿದೆ. ಯೂರಿಕ್ ಆಮ್ಲಮೂತ್ರ ಪಿಂಡದಲ್ಲಿ ಕಲ್ಲು ಉಂಟಾಗುವವರು ಹೆಚ್ಚಾಗಿ ಎಳನೀರು ಸೇವನೆ ಮಾಡುವುದು ಉತ್ತಮ. ಇದರಲ್ಲಿ ಪೊಟ್ಯಾಶಿಯಂ ಹೇರಳವಾಗಿದ್ದು, ಮೂತ್ರ ಪಿಂಡಕ್ಕೆ ಕಾರಣವಾಗುವ ಲವಣಾಂಶ ಕರಗಿಸುತ್ತದೆ. ಊಟವಾದ ನಂತರ ಎಳನೀರು ಕುಡಿದರೆ ಊಟದ ನಂತರ ಹೊಟ್ಟೆಯಲ್ಲಿ ಉರಿ ಉಂಟಾದಾಗ ಎಳನೀರು ಕುಡಿಯುವುದರಿಂದ ತಕ್ಷಣದಲ್ಲಿ ಆರಾಮ ಸಿಗುತ್ತದೆ. ಕಲ್ಲುಸಕ್ಕರೆ ಮತ್ತು ಎಲಕ್ಕಿ ಚೂರ್ಣ ಸೇರಿಸಿ ದಿನಕ್ಕೊಂದು ಬಾರಿ ಸೇವಿಸುತ್ತಿದ್ದರೆ ಎದೆನೋವು, ಬಿಕ್ಕಳಿಕೆ, ನಿದ್ರಾಹೀನತೆ, ಹೊಟ್ಟೆ ಹುಣ್ಣು ನಿವಾರಣೆಯಾಗುತ್ತದೆ. ಮಲಗುವ ಮೊದಲು ನೀವು ಎಳೆನೀರು ಕುಡಿದರೆ ಅದರಿಂದ ದೇಹದಲ್ಲಿ ಇರುವ ಎಲ್ಲಾ ವಿಷಕಾರಿ ಅಂಶವನ್ನು ಹೊರ ಹಾಕುವುದರೊಂದಿಗೆ ಮೂತ್ರಕೋಶವನ್ನು ಶುದ್ಧೀಕರಿಸುತ್ತದೆ. ರೋಗಗಳಿಗೆ ರಾಮಬಾಣವಾದ ಔಷಧೀಯ ಅಂಶವೂ ಎಳನೀರಿನಲ್ಲಿರುವುದರಿಂದ ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಠ ಒಂದು ಎಳನೀರನ್ನಾದರೂ ಕುಡಿಯುವ ಅಭ್ಯಾಸವನ್ನು ಇರಿಸಿಕೊಳ್ಳ ಬೇಕು ಆಗ ಮಾತ್ರ ಆರೋಗ್ಯವನ್ನು ವೃದ್ಧಿಸಿ ಕೊಳ್ಳಬಹುದು.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Continue Reading

ಲೈಫ್ ಸ್ಟೈಲ್

ತೂಕ ಸಮತೋಲನಕ್ಕೆ ಬೇಕು ಏಲಕ್ಕಿ..!

Published

on

By

ನಾವೆಲ್ಲರೂ ತೂಕ ಇಳಿಸಿಕೊಳ್ಳಬೇಕೆಂದು ಹಲವು ಹೊಸ- ಹೊಸ ತಯಾರಿ ಮಾಡುತ್ತಲೇ ಇರುತ್ತೇವೆ. ಆದ್ರೆ ಮನೆಯಲ್ಲೇ ಸಿಗುವ ಈ ಸಣ್ಣ ವಸ್ತುವಿನಿಂದ ನಮ್ಮ ದೇಹದ ತೂಕವನ್ನು ಬಲು ಬೇಗ ಕಡಿಮೆ ಮಾಡಬಹುದಂತೆ. ಹೌದು ಮನೆಯಲ್ಲೇ ಸಿಗುವ ಏಲಕ್ಕಿಯಿಂದ ನಾವು ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳಬಹುದಂತೆ. ಹಾಗಾದ್ರೆ ಈ ಏಲಕ್ಕಿಯಿಂದ ಯಾವೆಲ್ಲಾ ವಿಧಾನದಿಂದ ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳಬಹುದು ಅನ್ನೊದನ್ನು ತೋರುಸ್ತೀವಿ.
ಏಲಕ್ಕಿಯನ್ನು ಖೀರು, ಹಲ್ವಾ, ಪಲಾವ್ ನಂತಹ ಅನೇಕ ಖಾದ್ಯಗಳಿಗೆ ಬಳಸುವುದರಿಂದ ಪರಿಮಳವನ್ನು ನೀಡುತ್ತದೆ. ಹಸಿರು ಏಲಕ್ಕಿ ಸೇವಿಸಿದಲ್ಲಿ ಹೊಟ್ಟೆಯ ಸುತ್ತ ಬೊಜ್ಜು ಬೆಳೆಯಲಾರದು. ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ಮ ಮಟ್ಟವನ್ನು ಸಹ ನಿಯಂತ್ರಿಸುತ್ತದೆ.ಆಯುರ್ವೇದದ ಪ್ರಕಾರ, ಹಸಿರು ಏಲಕ್ಕಿ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ತೆಗೆದು ಹಾಕಲು ಸಹ ಸಹಾಯ ಮಾಡುತ್ತದೆ. ವಿಷಕಾರಿ ಅಂಶಗಳು ದೇಹದ ರಕ್ತದ ಹರಿವನ್ನುಅಡ್ಡಿ ಪಡಿಸುತ್ತದೆ ಮತ್ತು ನಮ್ಮ ಶಕ್ತಿಯ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ. ಇದಕ್ಕೆ ಏಲಕ್ಕಿ ಚಹಾ ಅತ್ಯುತ್ತಮವಾಗಿದೆ. ಹಸಿರು ಏಲಕ್ಕಿ ಅಜೀರ್ಣವನ್ನು ತಡೆಯುತ್ತದೆ, ತೂಕ ಇಳಿಸಿಕೊಳ್ಳಲು ಕೂಡ ಸಹಾಯಕವಾಗಿದೆ.ದೇಹದಲ್ಲಿ ಮೂತ್ರದ ರೂಪದಲ್ಲಿ ನೀರು ಸಂಗ್ರಹವಾಗುವುದನ್ನು ತಡೆಯುತ್ತದೆ. ಹಸಿರು ಏಲಕ್ಕಿಯ ಆಯುರ್ವೇದ ಗುಣ ಲಕ್ಷಣಗಳನ್ನು ಹೊಂದಿದ್ದು, ಇದು ಮೂತ್ರ ಪಿಂಡಗಳ ಸುಗಮ ಕಾರ್ಯ ನಿರ್ವಹಣೆಯನ್ನು ಉತ್ತೇಜಿಸುತ್ತದೆ. ಏಲಕ್ಕಿ ಕೊಬ್ಬನ್ನು ಕಡಿಮೆ ಮಾಡುವ ಗುಣ ಹೊಂದಿದ್ದು, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಹಾಗಾದ್ರೆ ಇನ್ನೇಕೆ ತಡ ಏಲಕ್ಕಿಯನ್ನು ತಿನ್ನಿ ನಿಮ್ಮ ಆರೋಗ್ಯ ವೃದ್ಧಿಸಿ ಕೊಳ್ಳಿ.
Fitness Resource – 1905 Scenic Hwy N, Ste 10000B Snellville, GA – Health & Fitness, Exercise & Fitness Programs, Health Clubs – (770)-978-5034 safe and dangerous roids fit women performing child yoga pose in fitness studio. healthy woman exercising on yoga mat in gym stock photo – alamy
ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Continue Reading

ಲೈಫ್ ಸ್ಟೈಲ್

ರುಚಿಯಾದ ಅಡುಗೆಗೆ ಈರುಳ್ಳಿ ಬದಲಿಗೆ ಏನೇನು ಬಳಸಬಹುದು ಗೊತ್ತ..?

Published

on

By

ಒಂದು ಕಡೆ ಗಗನ ಏರುತ್ತಿರುವ ಈರುಳ್ಳಿ ಬೆಲೆಯಿಂದಾಗಿ ಅದನ್ನು ಕತ್ತರಿಸುವುದಕ್ಕೆ ಮೊದಲೇ ಕಣ್ಣಿನಲ್ಲಿ ನೀರು ಬರುವ ಪರಿಸ್ಥಿತಿ ಉಂಟಾಗಿದೆ. ಇನ್ನು ಈರುಳ್ಳಿ ಹಾಕದೆ ಸಾರು ಅಥವಾ ಪಲ್ಯ ಮಾಡಿದರೆ ರುಚಿಸುವುದೇ ಇಲ್ಲ, ಇನ್ನು ಸಾರು, ಗ್ರೇವಿ ಈರುಳ್ಳಿ ಇಲ್ಲದೆ ಮಾಡುವುದೇ ಹೇಗೆ ಎಂಬುವುದೇ ಹೆಚ್ಚಿನವರ ಚಿಂತೆಯಾಗಿದೆ. ಇನ್ನು ಈರುಳ್ಳಿ , ಬೆಳ್ಳುಳ್ಳಿ ಹಾಕದೆ ಅಡುಗೆ ಮಾಡೋಣ ಅಂದರೆ ಈರುಳ್ಳಿ ರುಚಿ ನೋಡಿದವರಿಗೆ ಅಷ್ಟು ಇಷ್ಟವಾಗುವುದಿಲ್ಲ. ಅಡುಗೆಗೆ ಈರುಳ್ಳಿ ಹಾಕಿದರೆ ಅದರ ಸ್ವಾದವೇ ಬೇರೆ. ಟೊಮೆಟೊ ಗೊಜ್ಜು, ಪಲ್ಯ ಇವುಗಳು ರುಚಿಯಾಗಲು ಈರುಳ್ಳಿ ಬೇಕೇಬೇಕು.
1) ಗ್ರೇವಿ, ಸಾರುಗೆ ಮಾಡಲು ಈರುಳ್ಳಿ ಬದಲಿಗೆ ಗೋಡಂಬಿ ಕೂಡ ಅಧಿಕ ಬೆಲೆಯ ನಟ್ಸ್ ಆಗಿದ್ದರೂ ಹೀಗಿನ ಈರುಳ್ಳಿ ಬೆಲೆಗೆ ಹೋಲಿಸಿದರೆ ಗೋಡಂಬಿ ಬಳಸುವುದೇ ಸೂಕ್ತವಾಗಬಹುದು. ಒಂದು ಸಾರು ಮಾಡಲು ಕಡಿಮೆಯೆಂದರೂ ಸಾಧಾರಣ ಗಾತ್ರದ ಒಂದು ಈರುಳ್ಳಿ ಬೇಕು. ಅದೇ ಗ್ರೇವಿಯಾದರೆ ಈರುಳ್ಳಿ ಸ್ವಲ್ಪ ಅಧಿಕವೇ ಬೇಕು. ಪನ್ನೀರ್, ನಾನ್ವೆಜ್ ಗ್ರೇವಿಗೆ ಈರುಳ್ಳಿ ಹೆಚ್ಚು ಹಾಕಿದರೆ ಮಾತ್ರ ರುಚಿ. ಈರುಳ್ಳಿ ಬೆಲೆ ಅಧಿಕವಾಗಿರುವಾಗ ಈರುಳ್ಳಿ ಬದಲಿಗೆ ಗೋಡಂಬಿ ಹಾಕಿದರೆ ರುಚಿ ಚೆನ್ನಾಗಿ ಬರುತ್ತದೆ.
2) ಉತ್ತರ ಕರ್ನಾಟಕದಲ್ಲಿ ಕಡಲೆ ಹಿಟ್ಟು ಗ್ರೇವಿ ಹೆಚ್ಚಾಗಿ ಮಾಡಲಾಗುವುದು. ಕಡಲೆ ಹಿಟ್ಟು ಹಾಕಿದಾಗ ಗ್ರೇವಿ ರೀತಿ ಗಟ್ಟಿಯಾಗಿ ಬರುವುದರಿಂದ ಈರುಳ್ಳಿ ಹಾಕದಿದ್ದರೂ ನಡೆಯುತ್ತೆ.
3) ಆಲೂಗಡ್ಡೆ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ, ಸ್ವಲ್ಪ ಉಪ್ಪು ಹಾಗೂ ಮಸಾಲೆ ಹಾಕಿ ಮ್ಯಾಶ್ ಮಾಡಿ ಸಂಬಾರ್ ಗೆ ಹಾಕಿದರೆ ಸಂಬಾರ್ ರುಚಿಯಾಗುವುದು.
4) ಪನ್ನೀರ್ ಅನ್ನು ಮ್ಯಾಶ್ ಮಾಡಿ ಈರುಳ್ಳಿ ಬದಲಿಗೆ ಬಳಸಬಹುದು.
5) ಸೋರೆಕಾಯಿ/ಪಡವಲಕಾಯಿ ಇದನ್ನು ತುರಿದ ಈರುಳ್ಳಿ ರೀತಿ ಪಲ್ಯ ಮಾಡುವಾಗ ಬಳಸಬಹುದು.
6) ಈರುಳ್ಳಿ ಪುಡಿ ಈರುಳ್ಳಿಯಷ್ಟು ದುಬಾರಿಯಲ್ಲ. ಅಡುಗೆಗೆ ಈರುಳ್ಳಿ ರುಚಿ ಬೇಕೇಬೇಕು ಎಂದು ಬಯಸುವುದಾದರೆ ಈರುಳ್ಳಿ ಪುಡಿ ಬಳಸಬಹುದು. ಈರುಳ್ಳಿ ಹಾಕದ ಸಾರಿಗೆ ಸ್ವಲ್ಪ ಇಂಗು ಹಾಕಿದರೆ ರುಚಿ ಚೆನ್ನಾಗಿಯೇ ಬರುತ್ತದೆ. ಇನ್ನು ಸಲಾಡ್ಗೆ ಈರುಳ್ಳಿ ಬದಲಿಗೆ ಸೌತೆಕಾಯಿಯಿಂದಲೂ ಕೂಡ ಅಲಂಕರಿಸಬಹುದು. ಈರುಳ್ಳಿ ದುಬಾರಿಯಾದಾಗ ಈರುಳ್ಳಿ ಬಗ್ಗೆ ಚಿಂತೆ ಮಾಡುವ ಬದಲು ಮೊದಲೆಲ್ಲಾ ಮಳೆಗಾಲಕ್ಕಾಗಿ ಈರುಳ್ಳಿ ಸಂಗ್ರಹಿಸಿಡುತ್ತಿದ್ದ ಹಾಗೆ ಮಾಡಿಟ್ಟರೆ ಈ ರೀತಿ ಬೆಲೆ ಹೆಚ್ಚಿದಾಗ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಈರುಳ್ಳಿಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಸಂಗ್ರಹಿಸಿಟ್ಟರೆ ವರ್ಷದವರೆಗೆ ಬಳಸಬಹುದಾಗಿದೆ.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Continue Reading

Trending

Copyright © 2023 EXPRESS TV KANNADA

yaş sınırı olmayan bahis sitelerikareasbetdeneme bonusu veren sitelertürbanlı escortsiyah bayrak ayna amirkareasbet girişbakırköy escortkareasbetbetingo güncel girişdizimatFındıkzade EscortBitcoin Kabul Eden Bahis Sitelerigüvenilir casino sitelerigobahis girişasper casino girişesbet girişbullbahis girişbenimbahis girişbenimbahisGüvenilir poker siteleriSüper Ligizmir escortBakırköy Escortyabancı diziesenyurt escortistanbul escortbeylikdüzü escortbeylikduzu escortbeylikduzu escortbahceşehir escortbeylikdüzü escortesenyurt escortbeylikdüzü escortbeylikdüzü escortistanbul escortbullbahisbullbahisizmir travestiPHP Shell indirbetturkeybetturkeybetparkxslotstarzbetjojobetbetparkbetistmarsbahismarsbahis girişdeneme bonusu veren sitelerdeneme bonusu veren sitelerBets10 GirişBahis Siteleribetturkey