
ಸಿದ್ಧಗಂಗಾ ಶ್ರೀಗಳ ಬಗ್ಗೆ ಬೆಂಗಳೂರಿನ ಮಹಿಳೆಯೂಬ್ಬಳು
ಅವಹೇಳನಕಾರಿ ಟ್ವೀಟ್ ಮಾಡಿ ಹಗುರವಾದ ಮಾತನಾಡಿದ್ದಾಳೆ.
ಆಕೆ ತನ್ನ ಟ್ವಿಟರ್ ಖಾತೆಯಲ್ಲಿ ಶ್ರೀಗಳು ನಿಧನರಾದ ದಿನ ರಜೆ
ಘೋಷಣೆಯಾಗಿದ್ದಕ್ಕೆ, ಸೋ ಇದು ಅಫಿಷಿಯಲ್! ನಾಳೆ ಶಾಲೆ ,
ಕಾಲೇಜುಗಳೆಲ್ಲಾ ರಜೆ, ಅದು ನಾನು ಹಿಂದೆಂದೂ ಹೆಸರೇ ಕೇಳಿರದ
ಒಬ್ಬ ವ್ಯಕ್ತಿ ತೀರಿಕೊಂಡಿದ್ದಾರೆ ಎಂದು. ಇದೆಂತಹ ಹತಾಶ ಪರಿಸ್ಥಿತಿ.
ನಾಳೆ ಇದ್ದ ಮೀಟಿಂಗ್ ಶೆಡ್ಯೂಲ್ ಎಲ್ಲಾ ಬದಲಾಗುತ್ತೆ ಎಂದು ಟ್ವೀಟ್
ಮಾಡಿದ್ದಾರೆ. https://twitter.com/monikamanchanda/status/1087306691824230400
ಇನ್ನು ಆಕೆ ಇರುವುದು ಬೆಂಗಳೂರು ದಕ್ಷಿಣದಲ್ಲಿ. ಶ್ರೀಗಳ ಬಗ್ಗೆ ಆಕೆ ನಾನು
ಹೆಸರು ಕೂಡಾ ಕೇಳದವರು ನಿಧನರಾದರೆ ರಜೆ ಕೊಡಬೇಕಾ ಎಂದು
ವ್ಯಂಗ್ಯವಾಡಿದ್ದಾರೆ. ಸಿದ್ಧಗಂಗಾ ಶ್ರೀಗಳು ಅದೆಷ್ಟೋ ಲಕ್ಷ ಜನರ ಜೀವನ
ಕಟ್ಟಿ ಕೊಟ್ಟ ಮಹಾತ್ಮರು ಎಂದೆನಿಸಿಕೊಂಡಿದ್ದಾರೆ. ಈ ಬಗ್ಗೆ ತಿಳಿಯುವ
ಸೌಜನ್ಯ ಕೂಡ ಇಲ್ಲದೆ ಆಕೆ ಮಾತನಾಡಿರುವುದು ಇದೀಗ
ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
