ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬೆಂಗಳೂರಿನ ಬಿಬಿಎಂಪಿಯ ಎಲ್ಲಾ ಸದಸ್ಯರುಗಳು ತಮ್ಮ ಮೂರು ತಿಂಗಳ ಗೌರವಧನ ನೀಡಿದ್ದಾರೆ.
ಅಂದ ಹಾಗೇ ಇಂದು ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾದ ಮೇಯರ್ ಗೌತಮ್ ನೇತೃತ್ವದ ತಂಡ ಮೂರು ತಿಂಗಳ ಗೌರವಧನ ೫೦ ಲಕ್ಷ ರೂಪಾಯಿಗಳ ಚೆಕ್ನ್ನು ಹಸ್ತಾಂತರಿಸಿತು.
ಈ ವೇಳೆ ಕಂದಾಯ ಸಚಿವ ಆರ್.ಅಶೋಕ್, ಉಪಮಹಾಪೌರ ರಾಮಮೋಹನ ರಾಜು ಉಪಸ್ಥಿತರಿದ್ದರು.