ಕಾವೇರಿ ನದಿಯಲ್ಲಿ ಯೋಧ ಸೇರಿ ಇಬ್ಬರು ನೀರು ಪಾಲು..

ಅರಕಲಗೂಡು(ಹಾಸನ):ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಸಾವು ಕಂಡಿರುವ ಘಟನೆ ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿಯ ಗಡಿಭಾಗ ಕೊಡಗು ಜಿಲ್ಲೆಯ ಶನಿವಾರ ಸಂತೆ ಹೊಂದಿಕೊAಡಿರುವ ಕಟ್ಟೇಪುರದ ಬಳಿ ನಡೆದಿದೆ.
ಲೋಕೇಶ್ ನೀರುಪಾಲಾದ ಯೋಧ.ಸದ್ಯ ಈ ಯೋಧನನ್ನು ಕಾಪಾಡಲು ಹೋದ ಸ್ನೇಹಿತ ಲತೇಶ್ ಕೂಡ ಸಾವು ಕಂಡಿದ್ದಾರೆ ಎನ್ನಲಾಗಿದೆ.ಇನ್ನೂ ಇಬ್ಬರ ಶವವನ್ನು ಹೊರತೆಗೆದಿದ್ದು,ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನೂ ಯೋಧ ಲೋಕೇಶ್‌ಗೆ ವಾರದ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು ಎಂದು ತಿಳಿದು ಬಂದಿದೆ.

ಎ.ಎಸ್.ಸಂತೋಷ್ ಎಕ್ಸ್ ಪ್ರೆಸ್ ಟಿವಿ ಅರಕಲಗೂಡು(ಹಾಸನ)

Please follow and like us:

Related posts

Leave a Comment