ಆರೋಗ್ಯ / HEALTH

ಕರಡಿ ದಾಳಿ, ವ್ಯಕ್ತಿ ಸ್ಥಿತಿ ಗಂಭೀರ

Published

on

ಆನೇಕಲ್/ಹೊಸೂರು : ಕರಡಿ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಆನೇಕಲ್ ಸಮೀಪದ ತಮಿಳುನಾಡಿಗೆ ಸೇರಿರುವ ಬ್ಯಾಲಕೆರೆ ಎಂಬ ಗ್ರಾಮದಲ್ಲಿ ನಡೆದಿದೆ.
ಚಿಕ್ಕಣ್ಣ (೩೩) ದಾಳಿಗೊಳಾಗದ ವ್ಯಕ್ತಿ ಎಂದು ಗುರ್ತಿಸಲಾಗಿದೆ.ಈತ ಹೊಲದ ಕಡೆ ಹೋದಾಗ ಕರಡಿ ದಾಳಿ ನಡೆಸಿದ ಪರಿಣಾಮ ಚಿಕ್ಕಣ್ಣನ ತಲೆ ಚಿಪ್ಪಿಗೆ ಗಂಭೀರವಾಗಿ ಗಾಯವಾಗಿದೆ.ಹೀಗಾಗಿ ತಕ್ಷಣ ಆತನನ್ನು ತಮಿಳುನಾಡಿನ ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರಕ್ಕೆ ವರ್ಗಾವಣೆ ಮಾಡಬೇಕೆಂದು ಸೂಚಿಸಿದ್ದಾರೆ.ಇದರ ಹಿನ್ನೆಲೆಯಲ್ಲಿ ಆತನನ್ನು ಅಲ್ಲಿನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Click to comment

Trending

Exit mobile version