ಆರೋಗ್ಯ / HEALTH

ಬಾರ್ ಮಾಲೀಕರ ಹಗಲು ದರೋಡೆ..ಕುಡುಕರ ಸಿಟ್ಟು..

Published

on

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಏನೋ ಮದ್ಯ ಮಾರಾಟ ಆರಂಭಗೊAಡಿದೆ.ಆದರೆ ಎಂಆರ್‌ಪಿ ದರಕ್ಕಿಂತಲೂ ಹೆಚ್ಚಿನ ಬೆಲೆಯಲ್ಲಿ ಮದ್ಯ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಸದ್ಯ ಸರ್ಕಾರ ಅನುಮತಿ ಕೊಟ್ಟಿದ್ದೇ ತಡ ಬಾರ್ ಬಾಗಿಲು ತೆರದ ಮಾಲೀಕರು ಹಗಲು ದರೋಡೆಗಿಳಿದಿದ್ದು,೨೦ರಿಂದ ೯೦ ರೂಪಾಯಿವರೆಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದು ಬಯಲಾಗಿದ್ದು,ಕುಡುಕರನ್ನು ಸುಲಿಗೆ ಮಾಡಿರುವುದು ಬಯಲಾಗಿದೆ.
ಅಂದ ಹಾಗೇ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಎಸ್.ಟಿ.ಪೂಜಾರ್ ಹಾಗೂ ದಯಾನಂದ ಮೇಟಿ ಮಾಲಿಕತ್ವದ ಸಿಎಲ್-೨ ಬಾರ್‌ಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗಿದೆ.
ಇನ್ನು ಇಷ್ಟೆಲ್ಲಾ ಆದರೂ ಅಬಕಾರಿ ಹಾಗೂ ಪೊಲೀಸರು ಸುಮ್ಮನಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಶ್ರೀಧರ್ ಚಂದರಗಿ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Click to comment

Trending

Exit mobile version