ದೇವದುರ್ಗ(ರಾಯಚೂರು): ಸಿಡಿಲು ಬಡಿದು ೧೦ ಕುರಿಗಳು ಸಾವು ಕಂಡ ಘಟನೆ ಇಂದು ದೇವದುರ್ಗ ತಾಲೂಕಿನ ಎ.ಜಿ.ಕಾಲೋನಿಯ ಕುಲ್ಲೆರದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಕುಲ್ಲೆರದೊಡ್ಡಿ ಗ್ರಾಮದ ಮಲ್ಲಯ್ಯ ಎಂಬುವರಿಗೆ ಸೇರಿದ ಕುರಿಗಳೇ ಸಾವು ಕಂಡಿದ್ದು, ಮಧ್ಯಾಹ್ನ ಮರದ ಕೆಳಗೆ ಕುರಿಗಳು ನಿಂತಿದ್ದಾಗ ಈ ಘಟನೆ ನಡೆದಿದೆ.
ಎಂದಿನAತೆ ಬೆಳಿಗ್ಗೆ ಕುರಿ ಮೇಯಿಸಲು ಜಮೀನಿಗೆ ಕರೆದ್ಯೊಯಲಾಗಿತ್ತು.ಆದರೆ ಈ ವೇಳೆ ಗುಡುಗು, ಮಿಂಚು, ಸಿಡಿಲಿನೊಂದಿಗೆ ಮಳೆ ಆರಂಭವಾಗಿದೆ.ಪರಿಣಾಮ ಕುರಿಗಳೆಲ್ಲಾ ಮರವೊಂದರ ಕೆಳಗೆ ಆಶ್ರಯ ಪಡೆದಿವೆ.ಆದರೆ ಮರಕ್ಕೆ ಸಿಡಿದು ಬಡಿದು ಅದರ ಶಾಖಾ ತಾಗಿದ ಪರಿಣಾಮ ೧೦ ಕುರಿಗಳು ಸ್ಥಳದಲ್ಲಿಯೇ ಸತ್ತರೇ,ಉಳಿದ ಕುರಿಗಳು ಸಾವು-ಬದುಕಿನ ನಡುವೆ ಹೋರಾಟ ನಡೆಸಿವೆ ಎಂದು ತಿಳಿದು ಬಂದಿದೆ.
ಇನ್ನು ಸ್ಥಳಕ್ಕೆ ಪಶು ವೈದ್ಯಕೀಯ ಪರೀವಿಕ್ಷಕ ಡಾ.ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಈ ಸಂಬAಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರೇಶ ಭವಾನಿ ಎಕ್ಸ್ ಪ್ರೆಸ್ ಟಿವಿ ದೇವದುರ್ಗ(ರಾಯಚೂರು)