ಕೆ.ಆರ್.ಪುರಂ(ಬೆ0ನಗರ):ಕೃಷ್ಣರಾಜಪುರ ಕ್ಷೇತ್ರದ ದೇವಸಂದ್ರ ವಾರ್ಡಿನ ಬಿವಿಎನ್ಹೆಚ್ಎಸ್ ಶಾಲೆಯಲ್ಲಿ ಕೊರೊನಾ ವಾರಿಯರ್ಸ್ಗಳಿಗೆ ಸಚಿವ ಬೈರತಿ ಬಸವರಾಜ್, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹಾಗೂ ಬಿಜೆಪಿ ಮುಖಂಡ ಚನ್ನಕೇಶ ಹೂ ಮಳೆ ಸುರಿಸಿ ಸನ್ಮಾನಿಸಿ ಅಭಿನಂದಿಸಿದರು.
ನಂತರ ಮಾತನಾಡಿದ ಬಸವರಾಜ್ ನನ್ನ ಮತ ಕ್ಷೇತ್ರದಲ್ಲಿ ಕೊರೋನಾ ಸಂಪೂರ್ಣ ಗುಣಮುಖವಾಗಿದೆ,ಸದ್ಯ ನನ್ನ ಮತ ಕ್ಷೇತ್ರ ಕೊರೋನಾ ಮುಕ್ತವಾಗಿದೆ ಎಂದು ಸ್ಪಷ್ಟನೆ ನೀಡಿದರು.
ಕೃಷ್ಣರಾಜಪುರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ಪೊಲೀಸರು,ಆರೋಗ್ಯ ಇಲಾಖೆ, ಬಿಬಿಎಂಪಿ,ಸಾಫಾಯಿ ಕರ್ಮಾಚಾರಿಗಳಿಗೂ ಸನ್ಮಾನಿಸಿ ಧೈರ್ಯ ತುಂಬಿದರು.ಜೊತಯೆಗೆ ದೇವಸಂದ್ರದಲ್ಲಿ ಚನ್ನಕೇಶವ ಮತ್ತು ಸ್ನೇಹಿತರು ಕೊರೋನಾ ವಾರಿಯರ್ಸ್ ಗಳಿಗೆ ಪುಷ್ಷದಿಂದ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಜಯಪ್ರಕಾಶ್,ಶ್ರೀಕಾಂತ್, ಬಿಜೆಪಿ ಮುಖಂಡರಾದ ಶಿವಪ್ಪ, ಸಿಗೇಹಳ್ಳಿ ಸುಂದರ್ ಮುಂತಾದವರು ಇದ್ದರು.
ಮಂಜುನಾಥ್, ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರಂ(ಬೆ0.ನಗರ)