ಶಿರಾ(ತುಮಕೂರು):ಒಂದೆಡೆ ದೇಶದಾದ್ಯಂತ ಕೊರೋನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ಜನರ ಬದುಕು ಹಾಗೂ ಸರ್ಕಾರಿ ನೌಕರರನ್ನೂ ಸಂಕಷ್ಟಕ್ಕೆ ದೂಡುತ್ತಿದೆ. ಇಂತಹ ವೇಳೆಯಲ್ಲಿ ಸದ್ದಿಲ್ಲದೇ ಶಿರಾ ತಾಲೂಕಿನ ಡಾ.ರಾಜೇಶ್ ಗೌಡ ಬಳಗ ತನ್ನದೇ ಆದ ರೀತಿಯಲ್ಲಿ ಸೇವೆ ಮಾಡುತ್ತಿದೆ.
ನಗರದ ವೈದ್ಯರು,ಆಶಾ ಕಾರ್ಯಕರ್ತೆಯರು,ಪೊಲೀಸ್ ಸಿಬ್ಬಂದಿ,ವಿವಿಧ ಕಡೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಊಟ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಶಕ್ತರಿಗೆ ದಿನಸಿಗಳನ್ನು ಡಾ.ರಾಜೇಶ್ ಗೌಡ ಬಳಗ ನೀಡುತ್ತಿದೆ.
ಇನ್ನು ಬೆಂಗಳೂರಿನ ವೈದ್ಯ ಡಾ.ರಾಜೇಶ್ ಗೌಡ ಅವರ ಸೇವೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)