ಇಂಡಿ(ವಿಜಯಪುರ): ಕೊರೊನಾ ವೈರಸ್ ಇವತ್ತು ವಿಶ್ವದಲ್ಲಿ ಭಯಾನಕ ವಾತಾವರಣ ಮೂಡಿಸಿ ಜನರ ಜೀವನಕ್ಕೆ ಕುತ್ತು ತಂದಿದೆ ಎಂದು ವಿಧಾನ್ ಪರಿಷತ್ ಸದಸ್ಯ ಸುನೀಲ ಪಾಟೀಲ್ ಹೇಳಿದ್ದಾರೆ.
ತಾಲೂಕು ಪಂಚಾಯತ್ ಆವರಣದಲ್ಲಿ ಕೊರೊನಾ ವಾರಿಯರ್ಸಗೆ ಅಭಿನಂದನಾ ಪ್ರಮಾಣ ಪತ್ರ ಹಾಗೂ ಇಂಡಿ ತಾಲೂಕಿನ ಗ್ರಾಮ ಪಂಚಾಯತ್ಗಳಿಗೆ ಸಾನಿಟೈಜರ್ ಹಾಗೂ ಪೋರ್ಟಬಲ್ ಸ್ಪ್ರೆ ಪಂಪ್ ವಿತರಣೆ ಮಾಡಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸಂತೆ ಅಥವಾ ಇತರೆ ಚಟುವಟಿಕೆಗಳು ನಡೆಯುವಾಗ ಪೋರ್ಟಬಲ್ ಸ್ಪ್ರೆ ಪಂಪ್ ಸಹಾಯಕ್ಕೆ ಬರುತ್ತದೆ ಎಂದರು.
ಈ ವೇಳೆ ತಾಲೂಕು ಪಂಚಾಯತ್ ರಾಜ್ ಅಧಿಕಾರಿ ವಿಜಯಕುಮಾರ್ ಆಜೂರ, ಪುರಸಭೆ ಮುಖ್ಯ ಅಧಿಕಾರಿ ಜಿ.ಜಿ.ವಾಲಿ, ತೋಟಗಾರಿಕೆ ಹಿರಿಯ ಸಹಾಯಕ ಅಧಿಕಾರಿ ಆರ್.ಟಿ.ಹಿರೇಮಠ, ತಾಲ್ಲೂಕಿನ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಒ ಹಾಜರಿದ್ದರು.
ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ(ವಿಜಯಪುರ)