ಮಳವಳ್ಳಿ(ಮಂಡ್ಯ):ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿಗಳ ಬಳಗವತಿಯಿಂದ ಮಳವಳ್ಳಿ ತಾಲ್ಲೂಕಿನ ಮೂರು ಬಡ ಗ್ರಾಮಗಳಿಗೆ ಸುಮಾರು ೭ ಟನ್ ತರಕಾರಿ ಕಿಟ್ ವಿತರಿಸಲಾಯಿತು.
ಮಳವಳ್ಳಿ ತಾಲ್ಲೂಕಿನ ಮಾಗನೂರು ಕಾಲೋನಿ, ಹುಲ್ಲೇಗಾಲ, ಜೆ.ಸಿ ಪುರ ಗ್ರಾಮಗಳಿಗೆ ಜಿ.ಪಂ.ಸದಸ್ಯ ಹನುಮಂತ,ಡಿಕೆಶಿ ಅಭಿಮಾನಿಗಳ ಬಳಗ ಅಧ್ಯಕ್ಷ ಗಂಗಾಧರ್, ಜಿ.ಪಂ ಮಾಜಿ ಸದಸ್ಯ ಹೆಚ್.ಎಂ.ಮಹದೇವಸ್ವಾಮಿ ಸೇರಿದಂತೆ ಹಲವು ಅಭಿಮಾನಿಗಳು ಕಡುಬಡವರಿಗೆ ತರಕಾರಿ ಕಿಟ್ ವಿತರಿಸಿದರು.
ಇನ್ನೂ ಜಿ.ಪಂ ಸದಸ್ಯ ಹನುಮಂತ ಮಾತನಾಡಿ,ನಮ್ಮ ನಾಯಕ ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ. ಡಿ.ಕೆ ಶಿವಕುಮಾರ್ ಹುಟ್ಟುಹಬ್ಬದ ಅಂಗವಾಗಿ ರೈತರಿಂದ ೭ ಟನ್ ತರಕಾರಿ ನೇರವಾಗಿ ಖರೀದಿಸಿ ಅದನ್ನು ಮೂರು ಕುಗ್ರಾಮಗಳ ಕಡುಬಡವರಿಗೆ ವಿತರಿಸಲಾಯಿತು ಎಂದರು.
ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)