ಆರೋಗ್ಯ / HEALTH

ಕ್ವಾರೈಂಟೈನ್‌ನಲ್ಲಿರುವವರಿಗೆ ದಿನ ಬಳಕೆ ವಸ್ತು ವಿತರಣೆ

Published

on

ಅಫಜಲಪುರ(ಕಲಬುರಗಿ): ಅಫಜಲಪುರ ಶಾಸಕರ ಅಭಿಮಾನಿಯಿಂದ ಕ್ವಾರೈಂಟೈನ್‌ನಲ್ಲಿರುವವರಿಗೆ ದಿನಬಳಕೆಯ ವಸ್ತುಗಳ ಜೊತೆಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು,
ಅಂದ ಹಾಗೇ ಅಫಜಲಪುರ ತಾಲ್ಲೂಕಿನ ಶಾಸಕ ಎಂ.ವೈ.ಪಾಟೀಲ್ ಅವರ ಅಭಿಮಾನಿ ಉಡಚಾಣ ಹಟ್ಟಿ ಗ್ರಾಮದ ದತ್ತು ಬಂಡಗಾರ ಕ್ವಾರೈಂಟೈನ್‌ನಲ್ಲಿರುವ ಜನರಿಗೆ ದಿನಬಳಕೆಯ ಅಗತ್ಯ ವಸ್ತುಗಳು ಮತ್ತು ಊಟ ಹಾಗೂ ಉಪಹಾರದ ಸಾಮಗ್ರಿಗಳು ತರಕಾರಿ ಜೊತೆಗೆ ಮಕ್ಕಳಿಗೆ ಬಿಸ್ಕೇಟ್ ನೀಡಿ ಮಾನವೀಯತೆ ಮೆರೆದಿದ್ದಾರೆ.
ವಿತರಣೆಯ ಸಮಯದಲ್ಲಿ ಶಾಸಕರ ಮಗನಾದ ಡಾ.ಸಂಜಯ ಕುಮಾರ ಪಾಟೀಲ್ ಮಾತನಾಡಿ, ಜನರು ಕೊರೊನಾಗೆ ಹೆದರುವ ಅವಶ್ಯಕತೆ ಇಲ್ಲ.ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಿಕೊಂಡು ಹೋಗಿ, ಊರಿನ ಸಮಸ್ಯೆಗಳನ್ನು ಬಗೆಹರಿಸಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದತ್ತು ಬಂಡಗಾರ ಅವರ ನೇತೃತ್ವದಲ್ಲಿ ಸದಾ ಸನ್ನದ್ಧರಾಗಿದ್ದಾರೆ.ಅಲ್ಲದೆ,ತಾಲ್ಲೂಕಿನ ಅಭಿವೃದ್ಧಿಗೆ ಎಂ.ಯೈ.ಪಾಟೀಲ್ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಹಿರಿಯ ಮುಖಂಡರಾದ ಮಹಾದೇವಗೌಡ ಕರೂಟಿ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ ಜಮಾದಾರ್ ಉಪಸ್ಥಿತರಿದ್ದರು.

ಈರಣ್ಷ ಎಂ.ವಗ್ಗೆ ಎಕ್ಸ್ ಪ್ರೆಸ್ ಟಿವಿ ಅಫಜಲಪುರ(ಕಲಬುರಗಿ)

Click to comment

Trending

Exit mobile version