Connect with us

ಶಿರಾ

ಜೆಡಿಎಸ್ ಶಾಸಕ ಸತ್ಯನಾರಾಯಣ್ ರವರ ಜೀವನ ಚರಿತ್ರೆ..!

Published

on

ಶಿರಾ:ಶಾಸಕ ಬಿ.ಸತ್ಯನಾರಾಯಣ್ ತಾಲ್ಲೂಕಿನಲ್ಲಿ ಅಷ್ಟೇ ಅಲ್ಲ ಜಿಲ್ಲೆಯಲ್ಲಿಯೇ ಅತ್ಯಂತ ಸರಳ ಜನಪ್ರತಿನಿಧಿ ಎನ್ನುವ ಪ್ರಶಂಸೆಗೆ ಪಾತ್ರರಾದವರು. ಎರಡು ಬಾರಿ ಸಚಿವರಾಗಿದ್ದಾಗಲೂ ಅವರು ಅಧಿಕಾರದ ದರ್ಪ ಮೆರೆದವರಲ್ಲ. ಅಂದೂ ಸಹ ಸರಳವಾಗಿಯೇ ಇದ್ದವರು.ತಾಲ್ಲೂಕಿನ ಭುವನಹಳ್ಳಿ ಗ್ರಾಮದಲ್ಲಿ 1952ರ ಜುಲೈ 20ರಂದು ಬ್ಯಾಟಪ್ಪ ಮತ್ತು ಕಾಮಕ್ಕ ದಂಪತಿ ಪುತ್ರನಾಗಿ ಜನಿಸಿದ ಸತ್ಯನಾರಾಯಣ ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಮಧುಗಿರಿ ತಾಲ್ಲೂಕಿನ ದಂಡಿನದಿಬ್ಬ ಗ್ರಾಮದಲ್ಲಿ ಪೂರ್ಣಗೊಳಿಸಿದರು.ಪದವಿ ಪೂರ್ವ ಕಾಲೇಜು ಮುಗಿಸಿದ ನಂತರ ಮಂಡ್ಯ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.ವಕೀಲರಾಗಿ ವೃತ್ತಿ ಆರಂಭಿಸಿದ ಸತ್ಯನಾರಾಯಣ 1977 ರಲ್ಲಿ ಜನತಾ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದರು. 1982ರಲ್ಲಿ ತಾಲ್ಲೂಕು ಜನತಾ ಪಕ್ಷದ ಅಧ್ಯಕ್ಷರಾದರು.1989ರಲ್ಲಿ ಪ್ರಥಮ ಬಾರಿಗೆ ವಿಧಾನ ಸಭೆಗೆ ಸ್ವರ್ಧೆ ಮಾಡಿ ಸೋಲು ಅನುಭವಿಸಿದರು.ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಅಧಿಕಾರ ಪ್ರಾರಂಭಿಸಿದರು.1994ರಲ್ಲಿ ಶಿರಾ ಕ್ಷೇತ್ರದಿಂದ ಜನತಾ ಪಕ್ಷದ ಶಾಸಕರಾಗಿ ಆಯ್ಕೆಯಾದರು. ನಂತರ 2004 ಮತ್ತು 2018 ರಲ್ಲಿ ಜನತಾದಳದಿಂದ ಆಯ್ಕೆಯಾದರು. 7 ಬಾರಿ ವಿಧಾನಸಭೆ ಚುನಾವಣೆಗೆ ಸ್ವರ್ಧೆ ಮಾಡಿದ್ದು 3 ಬಾರಿ ಗೆಲವು ಸಾಧಿಸಿದರೆ.ಸತ್ಯನಾರಾಯಣ ಅವರು ಶಾಸಕರಾಗಿ ಆಯ್ಕೆಯಾದ 3 ಬಾರಿ ಸಹ ಅವರ ಪಕ್ಷ ರಾಜ್ಯದಲ್ಲಿ ಅಧಿಕಾರ ನಡೆಸಿರುವುದು ವಿಶೇಷವಾಗಿ. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಸತ್ಯನಾರಾಯಣ ಅವರು 1996ರಲ್ಲಿ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ಸಂಪುಟದಲ್ಲಿ ಕಾರ್ಮಿಕ, ಲಾಟರಿ ಹಾಗೂ ಸಣ್ಣ ಉಳಿತಾಯ ಖಾತೆಯ ಸಚಿವರಾದರು. 2004 ರಲ್ಲಿ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಸಂಪುಟದಲ್ಲಿ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಖಾತೆಯ ಸಚಿವರಾಗಿದ್ದರು. 2018 ರಲ್ಲಿ ಶಾಸಕರಾಗಿ ಆಯ್ಕೆಯಾದ ಸಮಯದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದರು.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮಾನಸ ಪುತ್ರನಂತೆ ಇದ್ದು ಕೊನೆಯ ಕ್ಷಣದವರೆಗೂ ಅವರಿಗೆ ನಿಷ್ಠರಾಗಿದ್ದರು. ಸಾಹಿತ್ಯದ ಬಗ್ಗೆ ಒಲವು ಹೊಂದಿದ್ದ ಅವರು ತನ್ನ ಅಧಿಕಾರದ ಅವಧಿಯಲ್ಲಿ ಜನಪರ ಕಲೆಗೆ ಪ್ರೋತ್ಸಾಹ ನೀಡಿದರು. ಮೊದಲ ಬಾರಿ ಶಾಸಕರಾಗಿದ್ದ ಸಮಯದಲ್ಲಿ ಗಡಿನಾಡ ಜಾನಪದ ಸಮ್ಮೇಳನ ನಡೆಸಿದರೆ ಎರಡನೇ ಬಾರಿ ಶಾಸಕರಾಗಿದ್ದ ಸಮಯದಲ್ಲಿ ಶಿರಾದಲ್ಲಿ 2 ದಿನಗಳ ರಾಜ್ಯ ಮಟ್ಟದ ಯುವಜನ ಮೇಳ ನಡೆಸುವ ಮೂಲಕ ಗ್ರಾಮೀಣ ಕಲೆಗಳನ್ನು ಪ್ರೋತ್ಸಾಹಿಸಿದರು. ಶಿರಾ ಪುರಸಭೆಯಲ್ಲಿ ನಗರಸಭೆಯಾಗಿ ಮೇಲ್ಡರ್ಜೆಗೇರಿಸಿದ್ದು,ಸಾರ್ವಜನಿಕ ಆಸ್ಪತ್ರೆ ಕಟ್ಟಡ, ಕೆಎಸ್ಆರ್ ಟಿಸಿ ಡಿಪೊ ನಿರ್ಮಾಣ, ವಿವೇಕಾನಂದ ಕ್ರೀಡಾಂಗಣ, ಬಾಲಕಿಯರ ಪದವಿ ಪೂರ್ವ ಕಾಲೇಜು, ಡಾ.ಬಿ.ಆರ್.ಅಂಬೇಡ್ಕರ್ ಭವನ, ಬರಗೂರು ರಾಮಚಂದ್ರಪ್ಪ ಬಯಲು ರಂಗಮಂದಿರ ಇವರ ಅಧಿಕಾರಾವಧಿಯಲ್ಲಿ ನಿರ್ಮಾಣವಾಗಿವೆ.

ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ..

Continue Reading
Click to comment

Leave a Reply

Your email address will not be published. Required fields are marked *

ಶಿರಾ

ಶಿರಾ ಉಪಚುನಾವಣೆ ಪ್ರತಿದಿನವೂ ವಿಬೀನ್ನ- ಕಸರತ್ತುಗಳ ನಡುವೆ ಮುಖಂಡರ ನಡೆ ನಿಗೂಢ..!

Published

on

By

ಶಿರಾ: ಕಳೆದ ತಿಂಗಳು ಕ್ಷೇತ್ರದ ಹಾಲಿ ಶಾಸಕರು ನಿಧನರಾದ ನಂತರ ಶಿರಾ ಕ್ಷೇತ್ರ ಪ್ರತಿ ದಿನವೂ ಒಂದಲ್ಲ ಒಂದು ರೀತಿ ಸುದ್ದಿಯಲ್ಲಿ ಇದೆ. ಬಾಜಪ ಕಳೆದ ಹತ್ತು ದಿನಗಳಿಂದ ಗ್ರಾಮದಲ್ಲಿ ಬೂತ್ತ್ ಮಟ್ಟದ ಸಭೆಗಳನ್ನು ನಡೆಸಿದರೆ ಜೆಡಿಎಸ್ ನಲ್ಲಿ ಪಕ್ಷದ ವರಿಷ್ಠ ನಡೆಯ ಕಡೆ ಗಮನ ಹರಿಸುತ್ತದೆ. ಇನ್ನೂ ಕೆಲ ಸಮಾಜ ಸೇವಕರು ದೇವಾಲಕ್ಕೆ ಹಣ ರಸ್ತೆ, ಶಾಲಾ ಕಾಲೇಜುಗಳ ಅವರಣ ಸೇರಿದಂತೆ ವಿವಿಧ ಕಡೆ ಪ್ರೇಮಿಗಳಿಗೆ ಸೇರಿದಂತೆ ವೃದ್ಧರಿಗೆ ಅನುಕೂಲ ಕಲ್ಪಿಸಲು ಸಿಮೆಂಟ್ ಕಾಂಕ್ರೀಟ್ ಕುರ್ಚಿಗಳನ್ನು ನೀಡುವ ಮೂಲಕ ಜನಸೇವೆ ಆರಂಭವಾಗಿದೆ. ಮುಖಂಡರ ಇಬ್ಬರ ಮುಸುಕಿನ ಗುದಾಟ್ಟಾ ಜೊತೆಗೆ ಮಾಜಿ ಸಚಿವ ಜಯಚಂದ್ರ ಗ್ರಾಮಗಳ ಭೇಟೆ ಹಾಗೂ ಕುಟುಂಬದ ಜೊತೆ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆಯನ್ನು ನಡೆಸಲಾಗುತ್ತಿದೆ.ಗ್ರಾಮದಲ್ಲಿ ಯಾರು ಅಭ್ಯರ್ಥಿ ಅದರೆ ಯಾವ ಯಾವ ಮುಖಂಡರು, ಯಾವ ಪಕ್ಷದ ಕಡೆ ,ನಾವು ಯಾರನ್ನು ಹಿಂಬಾಲಿಸಿಬೇಕು, ಅವರಿಂದ ನಮಗೆ ಏನು ಪ್ರಯೋಜನ ಎಂಬುದರ ಬಗ್ಗೆ ಚರ್ಚೆಗಳಾಗುತ್ತಿದ್ದು ಇದುವರೆಗೂ ಯಾವುದೇ ಪಕ್ಷಗಳಲ್ಲಿ ಅಭ್ಯರ್ಥಿಯ ಹೆಸರು ಘೋಷಣೆಯಾಗಿಲ್ಲ ಮತ್ತು ಚುನಾವಣಾ ಆಯೋಗ ದಿನಾಂಕ ನಿಗಧಿಯಾಗಿಲ್ಲ ಅದರೆ ಎಲ್ಲಾ ಕಡೆ ಕಸರತ್ತುಗಳ ನಡುವೆ ಮುಖಂಡರ ನಡೆ ನಿಗೂಢಗಳ ನಡುವೆ ಭಾರಿ ಕುತೂಹಲ ಕೆರಳಿಸುತ್ತಿದೆ..

ವರದಿ- ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ.

Continue Reading

ಶಿರಾ

ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಅಧಿಕಾರಿಗಳ ಬಳಿ ತೆರಳಿ ಅರ್ಜಿಸಲ್ಲಿಸಿ- ತಹಸೀಲ್ದಾರ್ ನಾಹಿದಾ ಜಮ್ ಜಮ್..!

Published

on

By

ಶಿರಾ:- ರೈತರು ತಾಲ್ಲೂಕು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹೋಬಳಿ ಮಟ್ಟದಲ್ಲಿ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತದೆ ಎಂದು ತಹಸೀಲ್ದಾರ್ ನಾಹಿದಾ ಜಮ್ ಜಮ್ ಅವರು ಹೇಳಿದರು.ಅವರು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಮುದಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ರೈತರಿಂದ ಅರ್ಜಿಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.ಪಹಣಿಗಳಲ್ಲಿ ಲೋಪದೋಷ,ಪೌತಿ ವಾಸು ಖಾತೆ,ಸೇರಿದಂತೆ ಇಲಾಖೆಗೆ ಸಂಬಂಧಿಸಿದಂತಹ ಯಾವುದೇ ಕೆಲಸಗಳಲ್ಲಿ ದಾಖಲೆಗಳ ಸಮೇತ ಅರ್ಜಿಗಳನ್ನು ಸಲ್ಲಿಸಿದಲ್ಲಿ ನಿಮ್ಮ ಕೆಲಸ ಸುಲಭವಾಗಿ ಬೇಗ ಆಗುತ್ತದೆ ಎಂದರು.ಹೋಬಳಿ ಮಟ್ಟದ ಪಿಂಚಣಿ ಅದಾಲತ್ನಲ್ಲಿಭಾಗವಹಿಸಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ. ಪಂಚ ಸೌಲಭ್ಯಗಳಾದ ಪಡಿತರ ಚೀಟಿ, ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನ ವೇತನ, ವಸತಿ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕಿದೆ. ಸರಕಾರದ ಯಾವುದೇ ಯೋಜನೆ, ಕಾರ್ಯಕ್ರಮಗಳ ಸದುಪಯೋಗ ಪಡೆಯಲು ಅರ್ಹ ಫಲಾನುಭವಿಗಳು ಮಧ್ಯವರ್ತಿಗಳ ಮೊರೆ ಹೋಗದೇ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳ ಬಳಿ ತೆರಳಿ ಅರ್ಜಿ ಸಲ್ಲಿಸುವಂತೆ ಕಿವಿಮಾತು ಹೇಳಿದರು. ಇದೆ ಸಂದರ್ಭದಲ್ಲಿ ಕಸಬಾ ವೃತ್ತದ ಕಂದಾಯ ಅಧಿಕಾರಿ ಸೇರಿದಂತೆ ಗ್ರಾಮಲೆಕ್ಕಿಕರು ಗ್ರಾಮದ ಮುಖಂಡರು ಭಾಗವಹಿಸಿದ್ದರು.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Continue Reading

ಶಿರಾ

ಇಂದಿನಿಂದ ನೂತನ ವಿಧಾನ ಸೌಧ ಕಾರ್ಯಾರಂಭ….!

Published

on

By

ಶಿರಾ: ಶಿರಾ ನಗರದ ಬುಕ್ಕ ಪಟ್ಟಣ್ಣ ರಸ್ತೆಯಲ್ಲಿ ರಾಷ್ಟ್ರೀಯಾ ಹೆದ್ದಾರಿ ನಂ48 ಪಕ್ಕದಲ್ಲಿ ನಿರ್ಮಿಸಿರುವ ನೂತನ ಮಿನಿ ವಿಧಾನ ಸೌದ ತಾಲ್ಲೂಕು ಮಟ್ಟದ ಕಚೇರಿಗಳ ಸಮುಚ್ಛಯ ಕಟ್ಟಡಕ್ಕೆ ದಿನಾಂಕ 10-09-2020 ರಂದು ಹಲವಾರು ಗೊಂದಲಗಳ ನಡುವೆಯು ಮಿನಿ ಸೌಧದ ಉದ್ಘಾಟನೆ ನೆರೆವೇರಿಸಲಾಯಿತು. ಇನ್ನೂ ಕಾರ್ಯಕ್ರಮದಲ್ಲಿ ರಾಜ್ಯದ ಕಂದಾಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಹಲವಾರು ಮುಖಂಡರು ಭಾಗಿಯಾಗಿದ್ದರು. ಉದ್ಘಾಟನೆ ನಂತರ ಇಂದು ಅಧಿಕೃತವಾಗಿ ತಹಶೀಲ್ದಾರರು ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಸ್ಥಳಾಂತರಗೊಂಡು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ..

Continue Reading

Trending

Copyright © 2023 EXPRESS TV KANNADA

yaş sınırı olmayan bahis sitelerikareasbetdeneme bonusu veren sitelertürbanlı escortsiyah bayrak ayna amirkareasbet girişbakırköy escortkareasbetbetingo güncel girişdizimatFındıkzade EscortBitcoin Kabul Eden Bahis Sitelerigüvenilir casino sitelerigobahis girişasper casino girişesbet girişbullbahis girişbenimbahis girişbenimbahisGüvenilir poker siteleriSüper Ligizmir escortBakırköy Escortyabancı diziesenyurt escortistanbul escortbeylikdüzü escortbeylikduzu escortbeylikduzu escortbahceşehir escortbeylikdüzü escortesenyurt escortbeylikdüzü escortistanbul escort30 TL Bonus Veren Bahis Siteleri betmatikmariobetonwinbetistsüpertotobetgrandpashabet telegramBetist Girişbullbahisbullbahisen iyi slot sitelerixslot giriş adresitipobet365ilk yatırım bonusu veren sitelerizmir travestiPHP Shell indirbetturkeybetturkeybetparkstarzbetjojobetbetparkbetistmarsbahismarsbahis girişdeneme bonusu veren sitelerdeneme bonusu veren sitelerBahis Siteleribetturkeybetturkeybetturkey girişbetturkeystarzbet