ಬೀದರ್

ಮಳೆಗಾಗಿ ದೇವರ ಮೊರೆ ಹೋದ ಗ್ರಾಮಸ್ಥರು,ಶಾಸಕ ಬಂಡೆಪ್ಪ ಖಾಶೆಂಪುರ್ ನೇತೃತ್ವದಲ್ಲಿ ವಿಶೇಷ ಪೂಜೆ..!

Published

on

ಬೀದರ್ :ಜಿಲ್ಲೆಯಲ್ಲಿ ಮಳೆಯ ಅಭಾವ ಉಂಟಾದ ಪರಿಣಾಮ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮನ್ನಳ್ಳಿ ಗ್ರಾಮಸ್ಥರು ಮಳೆರಾಯನಿಗಾಗಿ ದೇವರ ಮೊರೆ ಹೋಗಿದ್ದು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರ ನೇತೃತ್ವದಲ್ಲಿ ಗ್ರಾಮದ ಮೈಸಮ್ಮಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮನ್ನಳ್ಳಿ ಕೆರೆ ವೀಕ್ಷಿಸಿ,ಮೈಸಮ್ಮಾ ದೇವಿಗೆ ಶಾಸಕರು ವಿಶೇಷ ಪೂಜೆ ಸಲ್ಲಿಸಿದರು. ಈ ಬಾರಿ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದ್ದು, ಜಿಲ್ಲೆಯ ರೈತರಿಗೆ ಸಂಕಷ್ಟ ಎದುರಾಗಿದೆ.ಮೈಸಮ್ಮಾ ದೇವಿ ಜಿಲ್ಲೆಗೆ ಉತ್ತಮ ಮಳೆ ತರಲಿ. ಜಿಲ್ಲೆಯ ಕೆರೆ – ಕಟ್ಟೆಗಳು ಭರ್ತಿಯಾಗಲಿ. ಮನ್ನಳ್ಳಿ ಗ್ರಾಮದ ಕೆರೆ ತುಂಬಿ ರೈತರಿಗೆ, ಗ್ರಾಮಸ್ಥರಿಗೆ ಅನುಕೂಲವಾಗಲಿ,ಮೈಸಮ್ಮಾ ದೇವಿ ಉತ್ತಮ ಮಳೆ ಬೆಳೆಗಳನ್ನು ನೀಡಲಿ ಎಂದು ಪ್ರಾರ್ಥಿಸಿದರು.ಈ ಸಂದರ್ಭದಲ್ಲಿ ರಾಜು ಮುಲ್ಗೆ, ದೀಪಕ್,ಶಂಕರ್ ಬಾಬು ಸೇನಾ, ರಮೇಶ್ ಜಮಾದಾರ,ವೀರಶೆಟ್ಟಿ, ಚಂದ್ರಕಾಂತ ಮಡಿಕಿ, ಮಲ್ಲಿಕಾರ್ಜುನ, ಅನಿಲ್ ಪನ್ನಾಳಿ ಸೇರಿದಂತೆ ಗ್ರಾಮದ ವಿವಿಧ ಸಮುದಾಯಗಳ ಮುಖಂಡರು ಇದ್ದರು.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Click to comment

Trending

Exit mobile version