ಹಾಸನ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಜೀವನಾಧರಿತ ಮಹಾನಾಯಕ ಧಾರವಾಹಿಗೆ ಎಲ್ಲೇಡೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಲಿದೆ. ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದಲ್ಲಿ ಊರಿನ ಮುಖಂಡರೆಲ್ಲಾರೂ ಒಗ್ಗೂಡಿ ಮಹಾನಾಯಕ ಧಾರಾವಾಹಿಯ ಬ್ಯಾನರ್ ಗೆ ಪುಷ್ಪಾರ್ಚನೆ ಮಾಡಿ ದೀಪ ಹಚ್ಚಿ ಗೌರವವನ್ನು ಸಲ್ಲಿಸಿದ್ದರು. ಇನ್ನು ಅಧ್ಯಕ್ಷರಾದ ಯೋಗೇಶ್ ಮಾತನಾಡಿ ಜೀ ಕನ್ನಡಲ್ಲಿ ಮೂಡಿಬರುತ್ತಿರುವ ಮಹಾನಾಯಕ ಧಾರಾವಾಹಿ ಅಂಬೇಡ್ಕರ್ ರವರ ಜೀವನಾಧಾರಿತದ್ದಾಗಿದೆ. ಎಲ್ಲಾರೂ ಕೂಡ ರಾಘವೇಂದ್ರ ಹುಣಸೂರ್ ರವರಿಗೆ ಪ್ರೋತ್ಸಾಹಿಸಬೇಕೆ ಹೊರತು ಜೀವ ಬೇದರಿಕೆ ಹಾಕುವುದಲ್ಲಾ. ಮೇಳು-ಕೀಳು ಎಂಬಾ ಭೇದ ಭಾವ ಮಾಡದೇ ಎಲ್ಲಾರೂ ಒಂದೇ ಎಂಬಾ ಮನೋಭಾವನೆಯನ್ನು ಜನರು ಬೆಳಸಿಕೊಳ್ಳಬೇಕು. ರಾಘವೇಂದ್ರ ಹುಣಸೂರ್ ರವರಿಗೆ ಈ ಧಾರಾವಾಹಿಯನ್ನು ನಿಲ್ಲಿಸುವಂತೆ ಸಾಕಷ್ಟು ಬೇದರಿಕೆಗಳು ಬಂದಿದೆ. ಆದರೂ ಯಾವುದಕ್ಕೂ ಅಂಜದೇ ಧಾರಾವಾಹಿಯನ್ನು ನಿಲ್ಲಿಸದೇ ಮುಂದುವರೆಸುತ್ತಿದ್ದು ಅವರ ಈ ಧೈರ್ಯಕ್ಕೆ ನಮ್ಮ ದಲಿತ ವರ್ಗದವರಿಂದ ಪ್ರೋತ್ಸಾಹ ಯಾವಾಗಲೂ ಇರುತ್ತದೆ ಎಂದರೂ. ಇನ್ನೂ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಯೋಗೇಶ್, ಶಿವಣ್ಣ, ಮಾಜಿ.ತಹಶೀಲ್ದಾರರಾದ ಶಾಂತ್ ರಾಜ್ ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.
ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು