ತುಮಕೂರು : ತುಮಕೂರು ನಗರ ಸಮೀಪದ ದೇವರಾಯನದುರ್ಗ ಹಾಗೂ ನಾಮಚಿಲುಮೆಗೆ ತೆರಳುವ ಮಾರ್ಗದಲ್ಲಿರುವ ಬಸ್ ನಿಲ್ದಾಣದಲ್ಲಿ ಕರಡಿ ಪ್ರತ್ಯಕ್ಷವಾಗಿದೆ. ಅದೇ ಮಾರ್ಗದಲ್ಲಿ ಹೋಗುತ್ತಿದ್ದ ವ್ಯಕ್ತಿಯೋರ್ವ ಬಸ್ ನಿಲ್ದಾಣದಲ್ಲಿ ಯಾರೋ ಅಪರಿಚಿತ ವ್ಯಕ್ತಿ ಇದ್ದಂತೆ ಆತನ ಕಣ್ಣಿಗೆ ಕಾಣಿಸಿದೆ,ತದನಂತರ ಆತ ತನ್ನ ಮೊಬೈಲ್ ಲೈಟ್ ಹಾಕಿ ನೋಡಿದಾಗ ಬಸ್ ಸ್ಟ್ಯಾಂಡ್ ನಿಂದ ಕರಡಿ ಹೊರಕ್ಕೆ ಬರುವುದನ್ನು ಕಂಡು ಬೆರಗಾಗಿದ್ದಾನೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನಾಮಚಿಲುಮೆ ಸುತ್ತಮುತ್ತಲಿನ ಜನ ರಾತ್ರಿ ಓಡಾಡಲು ಆತಂಕ ವ್ಯಕ್ತಪಡಿಸಿದ್ದಾರೆ.
ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು