ಆನೆಕಲ್

ಕ್ಷೇತ್ರ ಶಿಕ್ಷಣಾಧಿಕಾರಿ ಹೆಸರಲ್ಲಿ ಫೇಸ್ ಬುಕ್ನಲ್ಲಿ ಖದೀಮರಿಂದ ಹಣಕ್ಕೆ ಬೇಡಿಕೆ..!

Published

on

ಆನೇಕಲ್ : ಕ್ಷೇತ್ರ ಶಿಕ್ಷಣಾಧಿಕಾರಿ ಬಿಇಓ ರಮೇಶ್ರವರು ಆನೇಕಲ್ನಲ್ಲಿ ಕೆಲಸ ಮಾಡಿ ಇದೀಗ ವರ್ಗಾವಣೆಯಾಗಿದ್ದರು. ಬಿಇಓ ರಮೇಶ್ ಅವರ ಹೆಸರಲ್ಲಿ ಫೇಸ್ ಬುಕ್ ಅಕೌಂಟ್ ಕ್ರಿಯೇಟ್ ಮಾಡಿ ಖದೀಮರು ಕೆಲವರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೆಲದಿನಗಳ ಹಿಂದೆ ಪೋಲಿಸ್ ಅಧಿಕಾರಿಯೊಬ್ಬರಿಗೆ ಇದೇ ರೀತಿ ವಂಚನೆ ಮಾಡಿದ್ದ ಖದೀಮರು ಇದೀಗ ರಮೇಶ್ ಅವರನ್ನು ಟಾರ್ಗೆಟ್ ಮಾಡಿದ್ದರು. ರಮೇಶ್ ರವರ ಪೊಟೋ ಹಾಗು ಡಿಟೇಲ್ಸ್ ಫೇಸ್ ಬುಕ್ನಲ್ಲಿ ಬಳಸಿ ವಂಚಿಸಿದ್ದಾರೆ. ಈಗಾಗಲೇ ಸ್ವೀಚ್ ಆಫ್ ಆಗಿರುವ ನಂಬರ್ ಗಳನ್ನು ಪೋನ್ ಪೇ ಹಾಗು ಗೂಗಲ್ಪೇಗೆ ಬಳಸಿ ವಿನಯ್ ಕುಮಾರ್ ಎಂಬುವವರ ಖಾತೆಗೆ ಹಣ ಜಮೆ ಮಾಡುವಂತೆ ಖದೀಮರು ಒತ್ತಾಯಿಸುತ್ತಿದ್ದರು. ಈ ಕುರಿತು ಬಿಇಓ ರಮೇಶ್ ಸೈಬರ್ ಕ್ರೈಂ ಗೆ ದೂರು ದಾಖಲಿಸಿದ್ದಾರೆ.

ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Click to comment

Trending

Exit mobile version