ಆನೆಕಲ್

ರೌಡಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಡಿವೈಎಸ್ಪಿ ಮಹಾದೇವಪ್ಪ..!

Published

on

ಆನೇಕಲ್: ಆನೇಕಲ್ ಠಾಣೆಯಲ್ಲಿನ ಡಿವೈಎಸ್ಪಿ ಮಹದೇವಪ್ಪ ಸುಮಾರು 50ಕ್ಕೂ ಹೆಚ್ಚು ರೌಡಿಗಳನ್ನು ಠಾಣೆಗೆ ಕರೆಸಿ ಇನ್ಮುಂದೆ ಯಾರಾದ್ರೂ ರೌಡಿಸಂ ಮುಂದುವರಿಸಿದರೆ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ನಿಮ್ಮ ಆಟಗಳು ನನ್ನ ಮುಂದೆ ನಡೆಯೋದಿಲ್ಲ, ಬಾಲ ಮುದುರಿಕೊಂಡು ಕೆಲಸ ಮಾಡಿಕೊಂಡು ಮನೆಯಲ್ಲಿ ಇರಬೇಕು. ಆಟ ಆಡುತ್ತೇವೆ ಎಂದರೆ ನಮ್ಮ ಬಂದೂಕು ಕೆಲಸ ಮಾಡುತ್ತದೆ. ಬಾಲ ಬಿಚ್ಚಿದರೆ ಪೊಲೀಸ್ ಇಲಾಖೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಯಾವಾಗ ಬೇಕಾದರೂ ಮನೆಗೆ ನುಗ್ಗಿ ಹೊಡೆಯುತ್ತೇವೆ, ಮನೆಯಲ್ಲಿ ವೆಪನ್ ಇಟ್ಟುಕೊಂಡು ಆಟವಾಡಿದರೆ ಇನ್ನು ಮುಂದೆ ಎಚ್ಚರ, ಜೊತೆಗೆ ಬಡ್ಡಿ ದಂದೆಯಲ್ಲಿ ಪಾಲ್ಗೊಂಡಿದ್ದರೆ ಕೂಡಲೇ ದಂಧೇ ನಿಲ್ಲಿಸಬೇಕು. ಎಂದು ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Click to comment

Trending

Exit mobile version