ಕೋಲಾರ: ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಸಚಿವರ ಮುಂದೆ ಶಾಸಕ ಹಾಗೂ ಸಂಸದರ ನಡುವೆ ವಾಗ್ವಾದ ನಡೆದಿದ್ದು, ಕೋಲಾರ ಸಂಸದ ಮುನಿಸ್ವಾಮಿ ಮತ್ತು ಮಾಲೂರಿನ ಶಾಸಕ ನಂಜೇಗೌಡ ಸಚಿವರಾದ ಸಿಸಿ ಪಾಟಿಲ್ ಎದುರಲ್ಲೆ ಜಟಾಪಟಿ ನಡೆಸಿದ್ದಾರೆ. ಮಾಲೂರಿನ ಕೊಮ್ಮನಹಳ್ಳಿ ಗ್ರಾಮದ ಬಳಿ ಇರುವ ನಂಜೇಗೌಡ ಮಾಲಿಕತ್ವದ ಕ್ರಷರ್ ಗೆ ಇಂದು ಸಚಿವರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸರ್ಕಾರಿ ಗುಂಡು ತೋಪಿನಲ್ಲಿ ಕ್ರಷರ್ ಮಾಡಿದ್ದಾರೆ ಎಂದು ಸಂಸದರು ಆರೋಪಿಸಿದ್ದಾರೆ. ಇನ್ನೂ ಗಣಿ ಹಾಗೂ ಭೂ ವಿಜ್ಞಾನಿ ಸಚಿವರಾಗಿರುವ ಸಿಸಿ ಪಾಟೀಲ್ ಕ್ರಷರ್ ಭೇಟಿ ಸಂದರ್ಭದಲ್ಲಿ,ಗುಂಡು ತೋಪಿನಲ್ಲಿ ಶಾಸಕರು ಕ್ರಷರ್ ಮಾಡುತ್ತಿದ್ದಾರೆ ಎಂದು ಸಂಸದ ಮುನಿಸ್ವಾಮಿ ಹೇಳಿದರು. ಸಚಿವರ ಮುಂದೆಯೇ ಬಹಿರಂಗವಾಗಿ ಹೇಳಿದ್ದನ್ನು ವಿರೋಧಿಸಿದ ಶಾಸಕರು, ಇದೆಲ್ಲಾ ಬಿಡಪ್ಪ ಪರ್ಸನಲ್ ಆಗಿ ತಗೋಬೇಡ ಎಂದು ಕೆರಳಿದ್ದಾರೆ.ಈ ವೇಳೆ ಸಂಸದ ಮುನಿಸ್ವಾಮಿ ನೀವು ಇದೆಲ್ಲಾ ಬಿಡಿ ನನಗೂ ಎಲ್ಲಾ ಗೊತ್ತಿದೆ ಎಂದು ಎರಡು ಗುಂಪಿನ ನಡುವೆ ಮಾತಿನ ಚಕಮಖಿ ನಡೆದಿದೆ. ಇನ್ನೂ ಈ ಸಂದರ್ಭದಲ್ಲಿ ರಾಜಕೀಯವನ್ನು ರಾಜಕೀಯವಾಗಿ ಎದುರಿಸಿ ವೈಯಕ್ತಿಕ ಬೇಡ ಎಂದು ಶಾಸಕರು ಟಾಂಗ್ ನೀಡಿದ್ರು.
ವರದಿ: ಮಾರುತೇಶ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಮಾಲೂರು