ಮಂಡ್ಯ

630 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ- ಶಾಸಕ ಡಾ.ಕೆ ಅನ್ನದಾನಿ ಅವರಿಂದ ಗುದ್ದಲಿ ಪೂಜೆ..!

Published

on

ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಅಲದಹಳ್ಳಿ,ಕಂಸಾಗರ, ಚನ್ನೀಪುರ ಹುಲ್ಲೇಗಾಲ, ಹೂವಿನಕೊಪ್ಪಲು ಗ್ರಾಮಗಳಲ್ಲಿ ಶಾಸಕ ಡಾ.ಕೆ ಅನ್ನದಾನಿ ರವರು 630 ಲಕ್ಷ ರೂ ವೆಚ್ಚದ ರಸ್ತೆಯ ಗುದ್ದಲಿ ಪೂಜೆ ನೇರವೇರಿಸಿದರು.ಎನ್ ಹೆಚ್ 209 ನಿಂದಾಗಿ ಅಟುವನಹಳ್ಳಿ, ಕಂಸಾಗರ, ಲಿಂಗಣಾಪುರದ ಮಾರ್ಗವಾಗಿ ಚಂದಹಳ್ಳಿಗೆ ಸೇರುವ ರಸ್ತೆ, 278 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿ ಇದಲ್ಲದೆ ಚನ್ನೀಪುರ ಮಾರ್ಗವಾಗಿ ದಡಮಹಳ್ಳಿಗೆ ಸೇರುವ ರಸ್ತೆ, 332 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿ,ಇದಲ್ಲದೆ ಹೂವಿನಕೊಪ್ಪಲು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲೋನಿಗೆ ಸಿ.ಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ನೇರಿಸಿದರು. ಇನ್ನೂ ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ರವಿ, ಚಂದಹಳ್ಳಿ ಶ್ರೀಧರ್ ಸೇರಿದಂತೆ ಮತ್ತಿತ್ತರರು ಇದ್ದರು

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version