ಮದುವೆಗೆ ಹುಡುಗಿ ಸಿಗದ ಹಿನ್ನೆಲೆ 34 ವರ್ಷದ ಪ್ರವೀಣ್ ಎಂಬ ಯುವಕ ಮನನೊಂದು ನೇಣಿಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕಿನ ಕಪ್ಪಸೋಗೆ ಗ್ರಾಮದಲ್ಲಿ ನಡೆದಿದೆ. ಆರೇಳು ವರ್ಷಗಳಿಂದ ಹುಡುಗಿ ಹುಡುಕುತ್ತಿದ್ದರೂ ಮದುವೆಗೆ ಹೆಣ್ಣು ಸಿಗದ ಹಿನ್ನೆಲೆ ಮಾನಸಿಕ ಖಿನ್ನತೆಗೆ ಒಳಗಾಗಿ ಮನೆಯಲ್ಲಿ ಪ್ರವೀಣ್ ನೇಣಿಗೆ ಶರಣಾಗಿದ್ದಾನೆ. ಸಂಬಂಧಿಕರಿರುವ ಎಲ್ಲಾ ಕಡೆ ಹೆಣ್ಣಿಗಾಗಿ ಹುಡುಕಾಟ ನಡೆಸಲಾಗಿತ್ತು. ಪ್ರವೀಣ್ ಕೃಷಿಕನಾದ ಕಾರಣ ಹೆಣ್ಣು ನೀಡಲು ನಿರಾಕರಿಸಲಾಗುತ್ತಿತ್ತು ಎಂದು ಮೃತನ ಸಹೋದರ ಪರಮೇಶ್ ನೋವನ್ನು ವ್ಯಕ್ತಪಡಿಸಿದ್ದಾನೆ.ಇನ್ನೂ ಮುಂದೆ ಯಾರೂ ಕೂಡ ಹುಡುಗ ಕೃಷಿಕ ಎಂದು ಕಡೆಗಣಿಸಬೇಡಿ ಎಂದು ಹೆಣ್ಣು ಹೆತ್ತವರಿಗೆ ಪ್ರವೀಣ್ ಸಹೋದರ ಪರಮೇಶ್ ಮನವಿ ಮಾಡಿದ್ದಾರೆ.ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ನಂಜನಗೂಡು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ವರದಿ- ಹುಲ್ಲಹಳ್ಳಿ ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು