ಕಲಬುರಗಿ: ಡಿಸೆಂಬರ್:೨೧: ರಫೆಲ್ ವಿಮಾನ ಖರೀದಿ ವಿಷಯ ಕುರಿತಂತೆ ಸುಪ್ರೀಂಕೋರ್ಟ್ ಆದೇಶದ ನಂತರವೂ ಕಾಂಗ್ರೆಸ್ ತನ್ನ ಸುಳ್ಳು ಪ್ರಚಾರವನ್ನು ಬಿಡುತ್ತಿಲ್ಲ ಎಂದು ಬಿಜೆಪಿ ಮುಖಂಡರಾದ ಸುಭಾಷ್ ರಾಥೋಡ್ ಮತ್ತು ಶಶೀಲ ನಮೋಶಿ ಕಲಬುರಗಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿದರು.
ರೆಫಲ್ ವಿಷಯಕ್ಕೆ ಸುಪ್ರೀಂಕೋರ್ಟ್ ಈಗಾಗಲೇ ಸ್ಪಷ್ಟವಾಗಿ ತನ್ನ ಆದೇಶವನ್ನು ಹೊರಡಿಸಿದೆ, ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಮೊಂಡು ಹಠ ಬಿಡದೆ ಸುಳ್ಳು ಪ್ರಚಾರ ನಡೆಸುತ್ತಿರುವುದು ಬೇಸರ ತಂದಿದೆ ಎಂದರು, ಅಲ್ಲದೆ ಅವರು ಈ ದೇಶದ ಜನರ ಕ್ಷಮೆ ಕೇಳಬೇಕೆಂದು ಅವರು ತಿಳಿಸಿದರು.