ಬಾಗಲಕೋಟೆ: ರಾಜ್ಯದಲ್ಲಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಮಾತ್ರೆ ಸಿಗದೇ ಪರದಾಡುತ್ತಿರುವ ನಂದಿನಿ ಹುನ್ನೂರ ಬಾಲಕಿಗೆ ನೆರವಿಗೆ ಇದೀಗ ಆರೋಗ್ಯ ಇಲಾಖೆ ಬಂದಿದೆ.
ಅAದ ಹಾಗೇ ಅಂಬ್ಯುಲೆನ್ಸ್ ಮೂಲಕ ಬಾಲಕಿ ಸೇರಿದಂತೆ ಆಕೆಯ ಕುಟುಂಬವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ತಿಂಗಳಿಗೊಮ್ಮೆ ತೆಗೆದುಕೊಳ್ಳುವ ಕಿಡ್ನಿ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದಿಂದ ಮಹಾರಾಷ್ಟ್ರದ ಮೀರಜ್ಗೆ ಕರೆದುಕೊಂಡು ಹೋಗಿದ್ದಾರೆ.
ಇನ್ನು ಬನಹಟ್ಟಿ ತಾಲೂಕು ವೈದ್ಯಾಧಿಕಾರಿ ಸಲಹೆಯಂತೆ ವೈದ್ಯಕೀಯ ಚಿಕಿತ್ಸೆ ವಾಹನ ವ್ಯವಸ್ಥೆ ಮಾಡಿ ಆರೋಗ್ಯ ಇಲಾಖೆ ಕಳುಹಿಸಿಕೊಟ್ಟಿದ್ದು,ನಿನ್ನೆ ಅಷ್ಟೆ ಜಮಖಂಡಿ ಆರ್ಎಸ್ಎಸ್ ಕಾರ್ಯಕರ್ತರು ಬಾಲಕಿಗೆ ಔಷಧಿ ನೀಡಿದ್ದರು.
ಶ್ಯಾಮ್ ತಳವಾರ್ ಎಕ್ಸ್ಪ್ರೆಸ್ ಟಿವಿ ಜಮಖಂಡಿ(ಬಾಗಲಕೋಟೆ)