ತಿ.ನರಸೀಪುರ: ಲಾಕ್ಡೌನ್ ನಿಯಮ ಉಲ್ಲಂಘಿಸಿ ಮೈಸೂರು ಜಿಲ್ಲೆ ತಿ.ನರಸೀಪುರ ಪಟ್ಟಣದಲ್ಲಿ ರೋಡಿಗೆ ಬರೋರ ಸಂಖ್ಯೆ ಹೆಚ್ಚಾಗಿದೆ.
ಸದ್ಯ ಹೀಗೆ ರೋಡಿಗೆ ಬರೋ ಕೆಲವರು ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿರುವ ಪೊಲೀಸ್ ಸಿಬ್ಬಂದಿಗಳಿಗೆ ಅವಾಜ್ ಹಾಕ್ತಿದ್ದಾರೆ.
ಅಂದ ಹಾಗೇ ಇಂದು ತಿ.ನರಸೀಪುರ ಪಟ್ಟಣದಲ್ಲಿ ಲಾಕ್ಡೌನ್ ನಡುವೆಯೇ ಯುವಕರ ಪುಂಡಾಟಕ್ಕೆ ಕೊನೆ ಯಾವಾಗ..? ಎಂಬ ಪ್ರಶ್ನೆ ಉದ್ಘವವಾಗಿದೆ.
ಇನ್ನು ಡಿಯೋ ಬೈಕ್ನಲ್ಲಿ ರೋಡಿಗೆ ಬಂದ ಯುವಕರಿಬ್ಬರು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಹಾಕಿದ್ದು,ಇದನ್ನು ವಿಡಿಯೋ ಚಿತ್ರೀಕರಿಸುತ್ತಿದ್ದ ಪತ್ರಿಕಾ ವರದಿಗಾರನಿಗೂ ಬೆದರಿಸುವ ಕೆಲಸ ಮಾಡಿದ್ದಾರೆ.
ಅಲ್ಲದೆ,ರೋಡಿಗೆ ಯಾಕೇ ಬರುತ್ತೀರಾ ಅಂತ ಕೇಳಿದ ಪೊಲೀಸರಿಗೆ ಈ ಯುವಕರಿಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ರೇವಣ್ಣ ಎಕ್ಸ್ ಪ್ರೆಸ್ ಟಿವಿ ತಿ.ನರಸೀಪುರ (ಮೈಸೂರು)