ಆನೇಕಲ್(ಬೆಂ.ನಗರ): ಆನೇಕಲ್ ತಾಲೂಕಿನ ಜಿಗಣಿ ಪೊಲೀಸರಿಂದ ಪ್ರಮುಖ ರಸ್ತೆಯಲ್ಲಿ ಪಥ ಸಂಚಲನ ನಡೆಯಿತು.
ಈ ವೇಳೆ ಪೊಲೀಸರಿಗೆ ಸಾರ್ವಜನಿಕರಿಂದ ಗೌರವ ಸೂಚಿಸಿದರು.ಅಲ್ಲದೆ,ಈ ಪಥ ಸಂಚಲನದಲ್ಲಿ ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಹಾಗೂ ಸ್ವಯಂ ಸೇವಕರು ಭಾಗಿಯಾಗಿದ್ದರು.
ಜೊತೆಗೆ ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಕೊರೊನಾ ವಾರಿಯರ್ಸ್ಗೆ ಸಾರ್ವಜನಿಕರಿಂದ ಪುಷ್ಪವೃಷ್ಟಿ ನಡೆಯಿತು.ಈ ಮೂಲಕ
ತುರ್ತುಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಶ್ರಮಿಕರಿಗೂ ಸಾರ್ವಜನಿಕರು ಗೌರವ ಸಮರ್ಪಣೆ ಮಾಡಿದರು.
ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)