ಮುಳಬಾಗಿಲು(ಕೋಲಾರ): ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೊಮ್ಮಸಂದ್ರದಲ್ಲಿ ನಡೆದಿದೆ.
ಮುನಿರತ್ನಮ್ಮ ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆಯಾಗಿದ್ದು,ಈಕೆ ಮೇಲೆ ಮದ್ಯ ಸೇವಿಸಿದ್ದ ಗಂಗಾಧರ(೨೫) ಹಲ್ಲೆ ನಡೆಸಿದ್ದಾನ್ನೆಲಾಗಿದೆ.
ಅಂದ ಹಾಗೇ ಆರೋಗ್ಯ ಇಲಾಖೆ ಸೂಚನೆಯಂತೆ ಬೊಮ್ಮಸಂದ್ರ ಗ್ರಾಮಕ್ಕೆ ಹೊಸದಾಗಿ ಬಂದವರ ಮಾಹಿತಿ ಕಲೆ ಹಾಕ್ತಿದ್ದ ಆಶಾ ಕಾರ್ಯಕರ್ತೆ ಮುನಿರತ್ನಮ್ಮ ಸಾಮಾಜಿಕ ಅಂತರ ಕಾಪಾಡಿ ಎಂದು ಕೆಲವು ಯುವಕರಿಗೆ ಹೇಳಿದ್ದಾರೆ.ಆದರೆ ಮೊದಲೇ ಎಣ್ಣೆ ವಿಚಾರಕ್ಕೆ ಪರಸ್ವರ ಗಲಾಟೆಯಲ್ಲಿ ಸೇರಿದ್ದ ಯುವಕರು, ಮುನಿರತ್ನಮ್ಮ ಜೊತೆ ವಾಗ್ದಾದ ನಡೆಸಿದ್ದಾರೆ.ಈ ವೇಳೆ ಗಂಗಾಧರ ಎಂಬ ಯುವಕ ಕಿವಿಯಲ್ಲಿ ರಕ್ತ ಬರುವಂತೆ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಿದ್ದಾನೆ.
ಸದ್ಯ ಗಾಯಾಳು ಮುನಿರತ್ನಮ್ಮ ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು(ಕೋಲಾರ)