ಕೆ.ಆರ್.ಪುರಂ(ಬೆ0.ನಗರ): ಕೆ.ಆರ್.ಪುರ ಕ್ಷೇತ್ರದ ರಾಮಮೂರ್ತಿನಗರದ ಗಂಗೂ ಲೇ ಔಟ್ನ ಚಿಕ್ಕಣ್ಣ ರಾಮಕ್ಕ ಸಂಸ್ಥೆಯಿAದ ಕನ್ನಡದ ಹೆಸರಾಂತ ಕಲಾವಿದರಿಗೆ ದಿನಸಿ, ತರಕಾರಿ ಮತ್ತು ಆರ್ಥಿಕ ನೆರವು ನೀಡಲಾಗಿದೆ.
ಅಂದ ಹಾಗೇ ಕಲಾವಿದರಾದ ಡಿಂಗ್ರಿ ನಾಗರಾಜ್, ರೇಖಾದಾಸ್, ಕೃಷ್ಣ ಸುರೇಶ್, ಬ್ಯಾಂಕ್ ಜನಾರ್ಧನ, ಶಂಕನಾದ ಅರವಿಂದ್, ಶಂಕನಾದ ಅಂಜಿನಪ್ಪ, ಅಪೂರ್ವ, ಗಂಗಾ ನಕ್ಷತ್ರ, ಶಿವಕುಮಾರಾಧ್ಯ, ಮೋಹನ್ ಜುನೇಜಾ,ಅಡುಗೂಡಿ ಶ್ರೀನಿವಾಸ್, ಮೈಸೂರು ರಮಾನಂದ್, ಜಗನಾಥ್ ಮುಂತಾದವರಿಗೆ ಸಂಸ್ಥೆ ವತಿಯಿಂದ ನೆರವು ನೀಡಲಾಯಿತು.
ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ನಾರಾಯಣಪ್ಪ, ಲಾಕ್ಡೌನ್ ನಿಂದಾಗಿ ಸುಮಾರು ನಾಲ್ಕು ತಿಂಗಳಿAದ ಯಾವುದೇ ಕೆಲಸ ಕಾರ್ಯವಿಲ್ಲದೆ ಸಂಭಾವನೆ ಅಥವಾ ಆದಾಯವಿಲ್ಲದೆ ನೂರಾರು ಕಲಾವಿದರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ನಮ್ಮ ಸಮಿತಿ ಮತ್ತು ಸ್ಥಳೀಯ ದಾನಿಗಳ ನೆರವಿನಿಂದ ಕೈಲಾದ ಸಹಾಯವನ್ನು ಕಷ್ಟದಲ್ಲಿರುವ ಕಲಾವಿದರಿಗೆ ಮಾಡಲಾಗಿದೆ ಎಂದರು.
ಈ ಸಂಧರ್ಭದಲ್ಲಿ ದಾನಿಗಳಾದ ಚಿದಂಬರ0,ರವಿಕುಮಾರ್,ಇಟಾಚ್ಚಿ ಮಂಜು,ಮ0ಜುನಾಥ್ ಗೌಡ, ದಿನಾಕರ್, ಶಿವಲಿಂಗೇಗೌಡ ಮುಕ್ತಾರ್, ಚೆನ್ನೆಗೌಡ, ನವೀನ್, ವೆಂಕಟೇಶ್, ಕೃಷ್ಣಪ್ಪ, ಚಲುವರಾಜ್, ನರೇಂದ್ರ, ಚಲಪತಿ ಮುಂತಾದವರು ಹಾಜರಿದ್ದರು.
ಮಂಜುನಾಥ್, ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರಂ(ಬೆ0.ನಗರ)