ಆನೇಕಲ್(ಬೆಂ.ನಗರ)):ಲಾಕ್ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ೫ ಸಾವಿರ ರೂಪಾಯಿ ಸಹಾಯಧನ ಘೋಷಣೆ ಮಾಡಿತ್ತು.ಆದರೀಗ ಆ ಸಹಾಯಧನ ದೊರಕುವ ಬಗ್ಗೆ ಅನೇಕ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅದರಲ್ಲೂ ಆನೇಕಲ್ ಎಎಸ್ಬಿ ಕಾಲೇಜು ಆವರಣದಲ್ಲಿರುವ ಆಟದ ಮೈದಾನದಲ್ಲಿ ಆಟೋ ಡ್ರೈವರ್ಗಳು ವಿಭಿನ್ನವಾಗಿ ಟಿಕ್ ಟಾಕ್ ಮಾಡಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿರುವ 5,೦೦೦ ಗೋವಿಂದ..ಗೋವಿಂದ.. ಎಂದು ತಮ್ಮ ಅಸಮಾಧಾನ, ಅಸಹಾಯಕತೆಯನ್ನು ಹೊರಹಾಕಿದ್ದಾರೆ.
ಅಂದ ಹಾಗೇ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿರುವ 5,೦೦೦ ಸಹಾಯಧನದ ಬಗ್ಗೆ ಆನೇಕಲ್ನ ಈ ಆಟೋ ಚಾಲಕರು ಟಿಕ್ ಟಾಕ್ನಲ್ಲಿ ವಿಭಿನ್ನವಾಗಿ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸದ್ಯ ಟಿಕ್ಟಾಕ್ನಲ್ಲಿ ಯಾವುದೇ ಕಾರಣಕ್ಕೂ ಸಿಎಂ ಯಡಿಯೂರಪ್ಪ ನೀಡಿರುವ ಆಶ್ವಾಸನೆ ನಮಗೆ ದೊರಕುವುದಿಲ್ಲ.ಹೀಗಾಗಿಬಿಎಸ್ ಯಡಿಯೂರಪ್ಪ ಆಟೋ ಟ್ಯಾಕ್ಸಿ ಚಾಲಕಿಗೆ ನೀಡುವ 5೦೦೦ ಗೋವಿಂದ ಗೋವಿಂದ ಎಂದು ಹೇಳಿದ್ದಾರೆ.
ಇನ್ನು ಆಟೋ ಡ್ರೈವರ್ಗಳು ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಿ.ಕಾರ್ತಿಕ್ ಗೌಡ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)