ಕೆ.ಆರ್.ಪುರಂ(ಬೆ0ನಗರ): ರಂಜಾನ್ ಹಬ್ಬಕ್ಕೆಂದು ಸಚಿವರು ಕೋಳಿ ಮತ್ತು ಆಹಾರ ಕಿಟ್ ವಿತರಣೆ ಮಾಡುವಾಗ ಸಾಮಾಜಿಕ ಅಂತರವಿಲ್ಲದೇ ಜನ್ರು ಮುಗಿಬಿದ್ದಿರುವ ಘಟನೆ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ನಡೆದಿದೆ.
ಅಂದ ಹಾಗೇ ಕೆ.ಆರ್.ಪುರದ ಬಿಜೆಪಿ ಶಾಸಕ ಮತ್ತು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ತಮ್ಮ ಕ್ಷೇತ್ರದ ಜನರಿಗೆ ರಂಜಾನ್ ಹಬ್ಬದ ಪ್ರಯುಕ್ತ ಕೋಳಿ ಮತ್ತು ಆಹಾರ ಕಿಟ್ ವಿರತೆಣೆ ಮಾಡುತ್ತಿದ್ದರು.ಆದರೆ ಕೋಳಿ ಪಡೆಯಲು ಮುಗುಬಿದ್ದಿರುವ ಜನರು ಕೊರೊನಾ ಭಯವನ್ನು ಮರೆತು ವರ್ತಿಸಿದ್ದಾರೆ.
ಇನ್ನು ಕೆ.ಆರ್.ಪುರ ಕ್ಷೇತ್ರದ ಬಸವನಪುರ ವಾರ್ಡ್ ಪಾಲಿಕೆ ಸದಸ್ಯ ಜಯಪ್ರಕಾಶ್ ನೇತೃತ್ವದ ಈ ಕಾರ್ಯಕ್ರಮಕ್ಕೆ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಚಾಲನೆ ನೀಡಿದರು. ನಂತರ ಜನರನ್ನು ದನ ಕರುಗಳಂತೆ ಕ್ಯೂನಲ್ಲಿ ಕೂಡಿಹಾಕಿ ಕಿಟ್ಗಳ ವಿತರಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಮಯದಲ್ಲಿ ಸಚಿವರ ಕಾರ್ಯಕ್ರಮದಲ್ಲೇ ಸಾಮಾಜಿಕ ಅಂತರವಿಲ್ಲ ಅಂತ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿ ಬಂದಿದೆ.
ಪರಿಸರ ಮಂಜುನಾಥ್ ಎಕ್ಸ್ ಪ್ರೆಸ್ ಟಿವಿ ಕೆ.ಆರ್.ಪುರಂ(ಬೆ0.ನಗರ)