ಪಾವಗಡ(ತುಮಕೂರು): ರಾಜ್ಯ ರೈತ ಸಂಘದ ಕೋಲಾರ ಮಹಿಳಾ ಜಿಲ್ಲಾಧ್ಯಕ್ಷೆ ನಳಿನಿ ಗೌಡ ಅವರಿಗೆ ರಾಸ್ಕಲ್ ಎಂದ ಕಾನೂನು ಸಚಿವ ಮಾಧುಸ್ವಾಮಿ ವರ್ತನೆ ಖಂಡಿಸಿ ತಾಲ್ಲೂಕು ಹಸಿರು ಸೇನೆ ಹಾಗೂ ರೈತ ಸಂಘ ಪಾವಗಡದ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು.
ಪ್ರತಿಭಟನೆ ವೇಳೆ ಮಾತನಾಡಿದ ರೈತ ಸಂಘದ ಅಧ್ಯಕ್ಷ ಪೂಜಾರಾಪ್ಪ, ರಾಜ್ಯ ರೈತ ಸಂಘದ ಕೋಲಾರ ಮಹಿಳಾ ಜಿಲ್ಲಾಧ್ಯಕ್ಷೆ ನಳಿನಿ ಗೌಡ ಸಚಿವ ಮಾಧುಸ್ವಾಮಿ ಎದುರು ತಮ್ಮ ಸ್ವಂತ ಸಮಸ್ಯೆಗಳನ್ನು ಹೇಳಿಕೊಂಡಿಲ್ಲ.ಬದಲಿಗೆ ಕೆರೆಗಳ ಒತ್ತುವರಿ ತೆರವು ವಿಚಾರವಾಗಿ ಮನವಿ ಮಾಡಿಕೊಂಡಿದ್ದಾರೆ.ಆದರೆ ಸಚಿವ ಮಾಧುಸ್ವಾಮಿ ಮಾತ್ರ ಎಲ್ಲರ ಎದುರೇ ನಳಿನಿ ಗೌಡರನ್ನ ನಿಂಧಿಸಿ ಅವಮಾನಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಕೂಡಲೇ ಸಚಿವರು ಬಹಿರಂಗವಾಗಿ ಕ್ಷಮೆ ಕೋರಬೇಕು,ಮುಂದೆ ಸಚಿವರು ಈ ರೀತಿ ವರ್ತನೆ ತೋರದಂತೆ ಸಿಎಂ ಗಮನವಹಿಸಬೇಕು ಎಂದು ಆಗ್ರಹಿಸಿದರು.
ಇಮ್ರಾನ್ ಉಲ್ಲಾ ಎಕ್ಸ್ ಪ್ರೆಸ್ ಟಿವಿ ಪಾವಗಡ(ತುಮಕೂರು)