ಆರೋಗ್ಯ / HEALTH

ಕವಿತಾಳ ಪಟ್ಟಣ ಸಂಪೂರ್ಣ ಸ್ತಬ್ಧ.. ಜನರಿಲ್ಲದೇ ಬಿಕೋ ಎಂದ ರಸ್ತೆಗಳು..

Published

on

ಸಿರವಾರ (ರಾಯಚೂರು): ಕೊರೊನಾಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ನಿನ್ನೆ ಸಂಜೆ ೭ ಗಂಟೆಯಿAದ ಜಾರಿಯಲ್ಲಿರುವ ಕರ್ಫ್ಯೂಗೆ ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಅಂದ ಹಾಗೇ ದಿನನಿತ್ಯ ಪಟ್ಟಣದ ಬಹುತೇಕ ರಸ್ತೆಗಳು ಸಾಕಷ್ಟು ವಾಹನಗಳಿಂದ ಗಿಜಿಗುಡುತ್ತಿದ್ದವು.ಆದರೆ ಇಂದು ಮಾತ್ರ ಸಂಚಾರ ವಿರಳವಾಗಿತ್ತು.ಅಲ್ಲದೆ, ಔಷಧಿ ಸೇರಿ ತುರ್ತು ಸೇವೆಗಳು ಹೊರತುಪಡಿಸಿ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿತ್ತು.
ಜೊತೆಗೆ ಅಂಗಡಿ-ಮುAಗಟ್ಟುಗಳು,ಮಟನ್ ಶಾಪ್, ಮಾರ್ಕೆm, ಬಸ್ ನಿಲ್ದಾಣ ಜನರಿಲ್ಲದೆ ಬಿಕೋ ಎನ್ನುವುದು ಕಂಡು ಬಂತು.
ಇನ್ನು ಕವಿತಾಳ್ ಪಟ್ಟಣದ ಮಸ್ಕಿ ಕ್ರಾಸ್ ಬಳಿ ಚೆಕ್ ಪೋಸ್ಟ್ ವ್ಯವಸ್ಥೆ ಮಾಡಲಾಗಿದ್ದು.ಅನವಶ್ಯಕವಾಗಿ ಓಡಾಡುವ ವಾಹನಗಳಿಗೆ ಬ್ರೇಕ್ ಬಿದ್ದಂತಾಗಿದೆ..
ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ(ರಾಯಚೂರು)

Click to comment

Trending

Exit mobile version