ಆರೋಗ್ಯ / HEALTH

ಮಳವಳ್ಳಿ ಶಾಸಕರಿಗೆ ಮೀನು ಮಾರಾಟಗಾರರ ಮೇಲೆ ಕಾಳಜೀ ಇಲ್ಲ..

Published

on

ಮಳವಳ್ಳಿ(ಮಂಡ್ಯ): ಮಳವಳ್ಳಿ ಕ್ಷೇತ್ರದ ಶಾಸಕರಿಗೆ ಮೀನು ಮಾರಾಟಗಾರರ ಮೇಲೆ ಕಾಳಜೀ ಇಲ್ಲ,ಇದುವರೆಗೂ ಆಹಾರ ಕಿಟ್ ವಿತರಣೆ ಮಾಡಿಲ್ಲ ಎಂದು ಸುದೀಪ್ ಅಭಿಮಾನಿಗಳ ಸಂಘ ಅಧ್ಯಕ್ಷ ಹಾಗೂ ಗಂಗಾ ಪರಮೇಶ್ವರಿ ಮೀನುಗಾರರ ಸಹಕಾರ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಕಿಡಿಕಾಡಿದ್ದಾರೆ.
ಮಳವಳ್ಳಿ ಪಟ್ಟಣದ ಗಂಗಾ ಮತ ಬೀದಿಯಲ್ಲಿರುವ ಮೀನು ಮಾರುಕಟ್ಟೆ ಮುಂಭಾಗ ಸುಮಾರು ೮೦ ಮಂದಿ ಮೀನು ಮಾರಾಟಗಾರರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು,ಚುನಾವಣೆ ಸಂದರ್ಭದಲ್ಲಿ ಮೀನು ಮಾರಾಟಗಾರ ಮೇಲೆ ಶಾಸಕರು ಒಲವು ತೋರಿಸಿದ್ದರಿ.
ಆದರೆ ಕೊರೊನಾ ಮಹಾಮಾರಿ ಯಿಂದ ತತ್ತರಿಸಿ ಹೋಗಿ ಸಂಕಷ್ಟದಲ್ಲಿರುವ ಮೀನುಮಾರಾಟರಿಗೆ ಆಹಾರ ಕಿಟ್ ವಿತರಣೆ ಮಾಡಿಲ್ಲ ಎಂದು ಆರೋಪಿಸಿದರು
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕ ಪುಟ್ಟಸ್ವಾಮಿ, ರಂಗಸ್ವಾಮಿ, ನರಸಯ್ಯ, ಶಿವಣ್ಣ, ಆನಂದ್ ಸೇರಿದಂತೆ ಮತ್ತಿತ್ತರರು ಹಾಜರಿದ್ದರು.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Click to comment

Trending

Exit mobile version