ಜನಸ್ಪಂದನ

ಅಧಿಕಾರಿಗಳ ಅಸಡ್ಡೆಯಿಂದ ೧೦ ವರ್ಷವಾದರೂ ಉದ್ಘಾಟನೆಗೊಳ್ಳದ ನೀರಿನ ಟ್ಯಾಂಕ್..

Published

on

ಶಹಾಪುರ(ಯಾದಗಿರಿ): ಈ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಬರೋಬ್ಬರಿ ಹತ್ತು ವರ್ಷಗಳಾಗಿವೆ.ಆದರೆ ಇದುವರೆಗೂ ಮಾತ್ರ
ಈ ಟ್ಯಾಂಕ್‌ಗೆ ಉದ್ಘಾಟನೆಗೊಂಡಿಲ್ಲ.ಜೊತೆಗೆ ಈ ಟ್ಯಾಂಕರ್ ಒಂದೇ ಒಂದು ಹನಿ ನೀರಿನ ಭಾಗ್ಯವನ್ನು ಕಂಡಿಲ್ಲ..ಈ ಮೂಲಕ ಗ್ರಾಮೀಣ ಭಾಗದ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿರುವುದಕ್ಕೆ ಇದು ಸ್ಪಷ್ಟ ಸಾಕ್ಷಿಯಾಗಿದೆ.
ಹೌದು,ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಸಗರ ಗ್ರಾಮದಲ್ಲೇ ಈ ನೀರಿನ ಟ್ಯಾಂಕ್ ಇದ್ದು,ಇದೀಗ ಅದು ಹಳ್ಳ ಹಿಡಿಯುವ ಸ್ಥಿತಿ ಬಂದಿದೆ.
ಅAದ ಹಾಗೇ ರಾಜ್ಯ ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದೆ.ಆದರೆ ಇದನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಂಡು ಸಂಬAಧಪಟ್ಟ ಅಧಿಕಾರಿಗಳು,ಜನಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿರುವುದು ಈ ಪ್ರಕರಣದಿಂದ ಸಾಬೀತಾಗಿದೆ.
ಇನ್ನು ಈ ನೀರಿನ ಟ್ಯಾಂಕ್ ಇದುವರೆಗೂ ಒಂದು ಹನಿ ನೀರನ್ನು ಕಂಡಿಲ್ಲ ಎಂದರೇ ಇಲ್ಲಿನ ಅಧಿಕಾರಿಗಳ ನಿರ್ಲಕ್ಷö್ಯ ಎಷ್ಟಿರಬಹುದು ಎಂಬುದನ್ನು ಊಹಿಸಬಹುದಾಗಿದೆ.ಜೊತೆಗೆ ಈ ಟ್ಯಾಂಕ್‌ಗೆ ಬೋರ್ವೆಲ್ ಕೊರೆಸಿಲ್ಲ,ಅಲ್ಲದೆ,ಪೈಪ್ ಲೈನ್ ಕೂಡ ಮಾಡಿಲ್ಲ.ಹೀಗಾಗಿ ಸರ್ಕಾರದ ದುಡ್ಡನ್ನು ಸಂಬAಧಪಟ್ಟ ಅಧಿಕಾರಿಗಳು ಪೋಲು ಮಾಡಿರುವುದು ಸ್ಪಷ್ಟವಾಗಿದೆ.
ಇದಲ್ಲದೆ, ಈ ನೀರಿನ ಟ್ಯಾಂಕ್ ಅವೈಜ್ಞಾನಿಕತೆಯಿಂದ ಕೂಡಿದ್ದು,ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಹಾಗೆ ಹಾಳು ಬಿದ್ದು ಶಿಥಿಲ ಸ್ಥಿತಿಯಲ್ಲಿದೆ.ಅಲ್ಲದೇ ಅಂಗನವಾಡಿಯ ಕಾಂಪೌAಡಿನಲ್ಲಿ ಈ ವಾಟರ್ ಟ್ಯಾಂಕ್ ನಿರ್ಮಿಸಲಾಗಿದೆ.ಪರಿಣಾಮ ಮುಂದೆ ಯಾವುದಾದರೂ ಅನಾಹುತಗಳು ಸಂಭವಿಸಿದರೆ ಸಂಬAಧಪಟ್ಟ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದು ಜೆಡಿಎಸ್ ಯುವ ಮುಖಂಡ ದೇವೇಂದ್ರಪ್ಪ ಬಸ್ಸಾ ಆರೋಪಿಸಿದ್ದಾರೆ.

ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ(ಯಾದಗಿರಿ)

Click to comment

Trending

Exit mobile version