ಆರೋಗ್ಯ / HEALTH

ಮಳೆ ಹಾನಿ..ಸಹಾಯ ಹಸ್ತ ಚಾಚಿದ ಶಿರಾ ತಾಲ್ಲೂಕು ವೈದ್ಯ..

Published

on

ಶಿರಾ(ತುಮಕೂರು): ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಮಳೆಯಿಂದ ನಷ್ಟ ಸಂಭವಿಸಿ ಮನೆಗಳನ್ನು ಕಳೆದುಕೊಂಡವರಿಗೆ ತಾಲ್ಲೂಕಿನ ವೈದ್ಯ ಡಾ.ರಾಜೇಶ್ ಗೌಡ ಸಹಾಯ ಹಸ್ತ ಚಾಚಿದ್ದಾರೆ.
ಸದ್ಯ ಮನೆ ಕಳೆದುಕೊಂಡಿರುವವರಿಗೆ ವೈಯಕ್ತಿಕ ಧನಸಹಾಯ ನೀಡಿರುವ ಜೊತೆಗೆ ತಮ್ಮ ಸ್ವಂತ ಖರ್ಚಿನಲ್ಲಿ ಅವರ ಮನೆ ದುರಸ್ಥಿ ಮಾಡಿಕೊಡಲು ಮುಂದಾಗಿದ್ದಾರೆ.
ಅAದ ಹಾಗೇ ಶಿರಾ ತಾಲೂಕಿನ ಮಳೆ ಹಾನಿ ಪ್ರದೇಶಗಳಾದ ಹುಲಿಕುಂಟೆ ಕಲ್ಲಹಳ್ಳಿ ಗ್ರಾಮದಲ್ಲಿ ಮೂರು ಮನೆ, ಹರಿಯಜ್ಜಿಹಳ್ಳಿ ಗ್ರಾಮದಲ್ಲಿ ಐದು ಮನೆ, ರಾಗಲಹಳ್ಳಿ ಗ್ರಾಮದಲ್ಲಿ ನಾಲ್ಕು ಮನೆಗಳು ಮಳೆಯಿಂದ ಹಾನಿಗೊಂಡಿವೆ.ಹೀಗಾಗಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ ವೈದ್ಯ ಡಾ.ರಾಜೇಶ್ ಗೌಡ ಅಲ್ಲಿನ ಸ್ಥಿತಿಗತಿ ಪರಿಶೀಲನೆ ನಡೆಸಿ ತಮ್ಮ ಸ್ವಂತ ಖರ್ಚಿನಲ್ಲಿಯೇ ಹಾನಿಗೊಂಡ ಮನೆಗಳ ದುರಸ್ಥಿಗೆ ಮುಂದಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಮನೆ ಮಾಲೀಕರಿಗೆ ವೈಯಕ್ತಿಕ ಸಹಾಯ ಮಾಡಿದ್ದಾರೆ.

ಶ್ರೀಮಂತ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Click to comment

Trending

Exit mobile version